ಹರಪನಹಳ್ಳಿ ತಾ|| ನಾಯಕ ನೌಕರರ ಸಂಘಕ್ಕೆ ಜಿ. ಕಾಂತರಾಜ್ ಆಯ್ಕೆ

ಹರಪನಹಳ್ಳಿ ತಾ|| ನಾಯಕ ನೌಕರರ ಸಂಘಕ್ಕೆ ಜಿ. ಕಾಂತರಾಜ್ ಆಯ್ಕೆ - Janathavaniಹರಪನಹಳ್ಳಿ, ಸೆ.27- ತಾಲ್ಲೂಕು ವಾಲ್ಮೀಕಿ ನಾಯಕ ನೌಕರರ ಸಂಘದ ಅಧ್ಯಕ್ಷರಾಗಿ ಜಿ.ಕಾಂತರಾಜ್ ಆಯ್ಕೆಯಾಗಿದ್ದಾರೆ.

ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ವಾಲ್ಮೀಕಿ ನೌಕರರ ಸಂಘದ ಪದಾಧಿಕಾರಿಗಳ ಪುನರ್ ರಚನೆ ಮಾಡಲಾಯಿತು. 

ಗೌರವಾಧ್ಯಕ್ಷರಾಗಿ ರೇವಣಸಿದ್ದಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ನಾಗಪ್ಪ, ಖಜಾಂಚಿಯಾಗಿ ಬಸವರಾಜ ಗುಂಡಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ನೌಕರರ ಸಂಘದ ಪರಿಷತ್ ಸದಸ್ಯ ಬಸವರಾಜ ಸಂಗಪ್ಪನವರ ತಿಳಿಸಿದ್ದಾರೆ.

error: Content is protected !!