ಬಿದಿರು – ಶ್ರೀಗಂಧ ಕೃಷಿ ಅರಣ್ಯೀಕರಣ ಕಾರ್ಯಾಗಾರ

ದಾವಣಗೆರೆ, ಸೆ.15- ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು, ಪ್ರಗತಿ ಪರ ಕೃಷಿಕರು ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಇತರೆ ಅನುಷ್ಠಾನ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬಿದಿರು-ಶ್ರೀಗಂಧ ಕೃಷಿ ಅರಣ್ಯೀಕರಣ ಕಾರ್ಯಾಗಾರ ನಡೆಯಿತು. ರಾಜ್ಯ ಬಿದಿರು-ಶ್ರೀಗಂಧ ಬೆಳೆಗಾರರ ಸಂಘದ ಅಧ್ಯಕ್ಷ ಎ.ಎಸ್. ಈಶ್ವರಪ್ಪ,   ಉಪಾಧ್ಯಕ್ಷ ಬಿ.ಎನ್. ವಿಶುಕುಮಾರ್ ಅವರು ಶ್ರೀಗಂಧ ಕೃಷಿಯ ಮಹತ್ವ, ಬೆಳೆಯುವ ವಿಧಾನ ಹಾಗೂ ಮಾರುಕಟ್ಟೆ ಕುರಿತು ಮಾಹಿತಿ ನೀಡಿದರು. 

error: Content is protected !!