291 ದೃಢ, 4 ಸಾವು

291 ದೃಢ, 4 ಸಾವು - Janathavani362 ಬಿಡುಗಡೆ, 2217 ಸಕ್ರಿಯ

ದಾವಣಗೆರೆ, ಸೆ. 1- ಜಿಲ್ಲೆಯಲ್ಲಿ ಮಂಗಳವಾರ 291 ಕೊರೊನಾ ಪಾಸಿಟಿವ್ ಪ್ರಕರಣ ಗಳು ವರದಿಯಾಗಿದ್ದು, 4 ಜನರು ಸಾವನ್ನಪ್ಪಿದ್ದಾರೆ. 362 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 9777 ಜನರಲ್ಲಿ ಸೋಂಕು ಕಾಣಿಸಿ ಕೊಂಡಿದ್ದು, 7365 ಜನರು ಸೋಂಕು ಮುಕ್ತರಾಗಿ ದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2217 ಸಕ್ರಿಯ ಪ್ರಕರಣಗಳಿವೆ.

ದಾವಣಗೆರೆ ತಾಲ್ಲೂಕಿನಲ್ಲಿ 143, ಹರಿಹರ 30, ಜಗಳೂರು 7, ಚನ್ನಗಿರಿ 54, ಹೊನ್ನಾಳಿ 49 ಹಾಗೂ ಹೊರ ಜಿಲ್ಲೆಯ 8 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.  ದಾವಣಗೆರೆ ಮೌನೇಶ್ವರ ಬಡಾವಣೆಯ 75 ವರ್ಷದ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆಯ 58 ವರ್ಷದ ಪುರುಷ, ಜಗಳೂರು ತಾಲ್ಲೂಕು ಜ್ಯೋತಿಪುರದ 60 ವರ್ಷದ ಪುರುಷ, ಹಾಗೂ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ನಿಂಗಾನಾಯ್ಕನಹಳ್ಳಿಯ 70 ವರ್ಷದ ಪುರುಷ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.

291 ದೃಢ, 4 ಸಾವು - Janathavaniರಂಭಾಪುರಿ ಶ್ರೀಗಳಿಗೆ ಸೋಂಕು ದೃಢ

ಚಿಕ್ಕಮಗಳೂರು, ಆ. 1- ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಮಂಗಳವಾರ ಕೊರೊನಾ ಸೋಂಕು ದೃಢಪಟ್ಟಿದೆ.

ಇತ್ತೀಚೆಗೆ ಶ್ರೀಗಳಿಗೆ ಜ್ವರ ಕಾಣಿಸಿಕೊಂಡಿತ್ತು ಎನ್ನಲಾಗಿದ್ದು, ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯರು ಮಂಗಳವಾರ ಕೋವಿಡ್ -19 ಟೆಸ್ಟ್ ಮಾಡಿಸಿದಾಗ ಸೋಂಕು ದೃಢಪಟ್ಟಿದೆ. ಶ್ರೀಗಳು ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

error: Content is protected !!