ಹರಿಹರ ತಾಲ್ಲೂಕು ಉಪ ಪ್ರಾಂಶುಪಾಲರ ಸಂಘಕ್ಕೆ ಆಯ್ಕೆ

ಹರಿಹರ ತಾಲ್ಲೂಕು ಉಪ ಪ್ರಾಂಶುಪಾಲರ ಸಂಘಕ್ಕೆ ಆಯ್ಕೆ - Janathavani

ಮಲೇಬೆನ್ನೂರು, ಆ.26- ಇಲ್ಲಿನ ಶ್ರೀ ಬೀರಲಿಂಗೇಶ್ವರ ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಜಯಣ್ಣ ಅವರು ಹರಿಹರ ತಾಲ್ಲೂಕು ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕ ಹಾಗೂ ಉಪ ಪ್ರಾಂಶುಪಾಲರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ನಿಕಟಪೂರ್ವ ಅಧ್ಯಕ್ಷ ಎಸ್.ಹೆಚ್.ಹೂಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಕೆ.ಶ್ರೀನಿವಾಸ್, ಉಪಾಧ್ಯಕ್ಷರಾಗಿ ಕೆ.ಜಿ.ಬಸವನಗೌಡ, ಪ್ರಧಾನ ಕಾರ್ಯದರ್ಶಿ ಬಿ.ಸಿದ್ದರಾಮೇಶ್, ಖಜಾಂಚಿಯಾಗಿ ರೇವಣ್ಣನಾಯ್ಕ, ಸದಸ್ಯರಾಗಿ ಮೆಹಬೂಬ್ ಬಾಷಾ, ಕುಬೇಂದ್ರಪ್ಪ, ರೇಣುಕಯ್ಯ, ಶ್ರೀಮತಿ ಸಂಧ್ಯಾರಾಣಿ, ಶ್ರೀಮತಿ ಮೆಹಬೂಬಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

error: Content is protected !!