ಎಚ್ಚರ… ! ಇದು ದಾವಣಗೆರೆ ಎಪಿಎಂಸಿ ಮೇಲ್ಸೇತುವೆ

ದಾವಣಗೆರೆ, ಆ. 21- ನಗರದ ಪಿ.ಬಿ. ರಸ್ತೆಯಿಂದ ಎಪಿಎಂಸಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯ ಆರಂಭ ಹಾಗೂ ಅಂತ್ಯದಲ್ಲಿ ಗುಂಡಿಗಳು ಬಿದ್ದು ವಾಹನ ಸವಾರರು ತೀವ್ರ  ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸದ್ಯ ಡಿಸಿಎಂ ಬಳಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಬೆಂಗಳೂರು ಮಾರ್ಗವಾಗಿ ಸಂಚರಿಸುವ ವಾಹನಗಳು ಎಪಿಎಂಸಿ ಮೇಲ್ಸೇತುವೆ ಮೂಲಕ ಸಾಗುತ್ತಿವೆ. ಇದರಿಂದಾಗಿ ವಾಹನಗಳ ಸಂಚಾರವೂ ಹೆಚ್ಚಾಗಿದೆ. ಆದರೆ ಪಿ.ಬಿ. ರಸ್ತೆ  ಪಕ್ಕದಲ್ಲಿಯೇ, ಮೇಲ್ಸೇತುವೆ ಆರಂಭದಲ್ಲಿಯೇ ಬೃಹತ್ ಗುಂಡಿಗಳು ಬಿದ್ದಿದ್ದು, ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ಸ್ಥಳೀಯರ ದುರ್ದೈವವೇ ಸರಿ. ಇನ್ನು ಮಳೆ ಬಂದಾಗಂತೂ ಇಲ್ಲಿ ರಸ್ತೆಯಾವುದೆಂದು ತಿಳಿಯದೆ, ದ್ವಿಚಕ್ರ ವಾಹನ ಸವಾರರು ಬಿದ್ದು-ಎದ್ದು ಸಾಗುವುದು ಸಾಮಾನ್ಯವಾಗಿದೆ. ಇನ್ನು ಮೇಲ್ಸೇತುವೆ ಮೇಲ್ಭಾಗದಲ್ಲೂ ಗುಂಡಿಗಳು ಬಿದ್ದಿದ್ದು, ಸೇತುವೆ ಕಾಮಗಾರಿ ಗುಣಮಟ್ಟವನ್ನು ಪ್ರಶ್ನಿಸುವಂತಿವೆ.

error: Content is protected !!