ಆಸ್ಪತ್ರೆಯಲ್ಲಿ ಕೊರೊನಾ ರೋಗಿಯ ಆತ್ಮಹತ್ಯೆ

ಆಸ್ಪತ್ರೆಯಲ್ಲಿ ಕೊರೊನಾ ರೋಗಿಯ ಆತ್ಮಹತ್ಯೆ - Janathavaniದಾವಣಗೆರೆ, ಆ.23- ಕೋವಿಡ್ ರೋಗಿಯೋರ್ವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ‌ಮಾಡಿಕೊಂಡಿರುವ ಘಟನೆ ನಗರದಲ್ಲಿಂದು ಇಂದು ನಡೆದಿದೆ.

ಶಿವಕುಮಾರ ಸ್ವಾಮಿ ಬಡಾವಣೆಯ ಜಿ.ವಿ. ಶಶೀಧರ್  (55) ಮೃತ ವ್ಯಕ್ತಿ. ಈತ ದಲ್ಲಾಲಿ ವ್ಯಾಪಾರಿಯಾಗಿದ್ದು, ಇಲ್ಲಿನ ಎಪಿಎಂಸಿಯಲ್ಲಿ ದಲ್ಲಾಲಿ ಅಂಗಡಿ ಇದೆ ಎಂದು ಹೇಳಲಾಗುತ್ತದೆ.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಇದೇ ದಿನಾಂಕ 18ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ 9-30ರ ಸುಮಾರಿಗೆ ಊಟ ‌ನೀಡಲು ಆಸ್ಪತ್ರೆಯ ನರ್ಸ್ ಈತನ ವಾರ್ಡ್ ಬಳಿ ಬಂದಾಗ ಒಳಗಿನಿಂದ ವಾರ್ಡ್ ನ ಡೋರ್ ಲಾಕ್ ಆಗಿದ್ದು, ಓಪನ್ ಆಗಲಿಲ್ಲ. ಆಗ ಕಿಟಕಿಯಲ್ಲಿ ನೋಡಿದಾಗ ಈತ ತನ್ನ ಪಂಚೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಬಂತು ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. 

ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!