ನದಿಯಲ್ಲಿ  ಮುಳುಗಿದ ಮಗಳ ಶವ ಹುಡುಕಿಸಲು ಪಾಲಕರ ಒತ್ತಾಯ

ರಾಣೇಬೆನ್ನೂರು, ಆ. 20 –  ಇದೇ ದಿನಾಂಕ 16 ರಂದು ಕುಮದ್ವತಿ ನದಿಯಲ್ಲಿ ಮುಳುಗಿರುವ ತಮ್ಮ ಮಗಳು ಶಶಿಕಲಾ ಶವವನ್ನು ಸರ್ಕಾರದಿಂದ  ಎನ್ ಡಿ ಆರ್ ಎಫ್ ತಂಡದ ಮೂಲಕ ಹುಡುಕಿಸಿ ಕೊಡುವಂತೆ ಶಿವಪ್ಪ ಹಾಗೂ ನಾಗಮ್ಮ ದಂಪತಿ ತಹಶೀಲ್ದಾರರಿಗೆ ಇಂದು ಮನವಿ ಸಲ್ಲಿಸಿದರು.

ತಾಲ್ಲೂಕಿನ ಮಲಕನಹಳ್ಳಿ ಗ್ರಾಮದ ಯುವತಿ ಶಶಿಕಲಾ ಅಂದು ಸಂಜೆ ಬಟ್ಟೆ ತೊಳೆಯಲು ಗ್ರಾಮದ ಕುಮದ್ವತಿ ನದಿಗೆ ತೆರಳಿದಾಗ ಕಾಲು ಜಾರಿ ನದಿಯಲ್ಲಿ ಮುಳುಗಿದ್ದಳು. ಹಲಗೇರಿ ಠಾಣೆ ಪೋಲೀಸರು ಹಾಗೂ ಅಗ್ನಿಶಾಮಕ ದಳದವರು ಇದುವರೆಗೂ ಪ್ರಯತ್ನಿಸಿದರು ತಮ್ಮ ಮಗಳ ಶವ ಸಿಕ್ಕಿಲ್ಲ. ಕಾರಣ  ನುರಿತ ತಂಡ ಕರೆಸಿ ಮಗಳ ಶವ ಹುಡುಕಿಸುವಂತೆ ಪಾಲಕರು ಆಗ್ರಹಿಸಿದ್ದಾರೆ.

error: Content is protected !!