ದಾವಣಗೆರೆ, ಆ.14- ಗ್ರಾಮೀಣ ಕೂಟ ಹಾಗೂ ನವ್ಯದಿಶಾ ಸಹಯೋಗದಲ್ಲಿ ಪಾಲಿಕೆ ಪೌರ ಕಾರ್ಮಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಲು ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ ಅವರಿಗೆ ಹಸ್ತಾಂತರಿಸಲಾಯಿತು.
ಉಪ ಆಯುಕ್ತ ವಿ.ಎಂ. ಪ್ರಭುಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಶೃತ ಡಿ. ಶಾಸ್ತ್ರಿ, ಆರೋಗ್ಯ ನಿರೀಕ್ಷಕ ಸಂತೋಷ್, ಗ್ರಾಮೀಣ ಕೂಟದ ವಲಯ ವ್ಯವಸ್ಥಾಪಕ ಎಂ. ಆರ್. ಸಚಿನ್ ಕುಮಾರ್, ವಲಯ ವ್ಯವಸ್ಥಾಪಕ ಕೆ.ಕೆ. ರಂಗನಾಥ್, ಶಾಖಾ ವ್ಯವಸ್ಥಾಪಕ ಜಿ.ಟಿ. ನಾಗರಾಜ್, ನವ್ಯದಿಶಾ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ವಿ. ಯಂಜೇರಪ್ಪ, ಅಭಿವೃದ್ಧಿ ಅಧಿಕಾರಿಗಳಾದ ಕೆ. ರಾಜೇಶ್ ಹಾಗೂ ಡಿ.ಸಿ. ದಯಾನಂದ್ ಉಪಸ್ಥಿತರಿದ್ದರು.