172 ದೃಢ, 145 ಬಿಡುಗಡೆ

172 ದೃಢ, 145 ಬಿಡುಗಡೆ - Janathavaniದಾವಣಗೆರೆ, ಆ. 11-  ಜಿಲ್ಲೆಯಲ್ಲಿ ಮಂಗಳವಾರ 172 ಕೊರೊನಾ ಪಾಸಿಟಿವ್ ಪ್ರಕರಣ ಗಳು ದೃಢಪಟ್ಟ ವರದಿಯಾಗಿದೆ.  ಐವರು ಸಾವನ್ನಪ್ಪಿದ್ದು, 145 ಜನರು ಸೋಂಕು ಮುಕ್ತರಾಗಿ ಬಿಡುಗಡೆ ಯಾಗಿದ್ದಾರೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ 3830 ಜನರಲ್ಲಿ ಸೋಂಕು ಕಾಣಿಸಿ ಕೊಂಡಿದ್ದು, 2478 ಜನರು ಬಿಡುಗಡೆಯಾಗಿದ್ದಾರೆ. ಪ್ರಸ್ತುತ 1247 ಸಕ್ರಿಯ ಪ್ರಕರಣಗಳಿವೆ.

ದಾವಣಗೆರೆ ತಾಲ್ಲೂಕಿನಲ್ಲಿ 81, ಹರಿಹರ 23, ಜಗಳೂರು 1, ಚನ್ನಗಿರಿ 29, ಹೊನ್ನಾಳಿ 36 ಹಾಗೂ ಹೊರ ಜಿಲ್ಲೆಯ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ವಿನೋಬ ನಗರದ 53ರ ಪುರುಷ ಹಾಗೂ 70ರ ವೃದ್ಧೆ, ಪಿ.ಜೆ. ಬಡಾವಣೆಯ 71ರ ವೃದ್ಧ, ಎಂ.ಸಿ.ಸಿ. ಬಿ ಬ್ಲಾಕ್‌ನ 62ರ ಮಹಿಳೆ, ಬಸವರಾಜ ಪೇಟೆಯ 48ರ ಪುರುಷ ಸಾವನ್ನಪ್ಪಿದ್ದಾರೆ.

ದಾವಣಗೆರೆಯ ಕೆಟಿಜೆ ನಗರ 18ನೇ ಕ್ರಾಸ್‌ನ 52ರ ಪುರುಷ, ಆವರಗೆರೆ ಶೇಖರಪ್ಪ ಬಡಾವಣೆಯ 44ರ ಪುರುಷ, ಆನೆಕೊಂಡ 65ರ ಪುರುಷ, ನಿಟುವಳ್ಳಿಯ 33ರ ಪುರುಷ, ಪೊಲೀಸ್ ಕ್ವಾಟ್ರಸ್‌ನ 32ರ ಮಹಿಳೆ, 8ರ ಬಾಲಕಿ, ಕೆ.ಬಿ. ಬಡಾವಣೆಯ 48ರ ಪುರುಷ, ಸಿದ್ದವೀರಪ್ಪ ಬಡಾವಣೆಯ 47ರ ಪುರುಷ, ಕೆ.ಆರ್. ರಸ್ತೆ ಅಮರಪ್ಪನ ತೋಟದ 25ರ ಮಹಿಳೆ, ರಾಮ ನಗರದ 42ರ ಪುರುಷ, ಕುಂದುವಾಡ ರಸ್ತೆಯ 53ರ ಪುರುಷ, 

ಚೌಕಿಪೇಟೆಯ 63ರ  ಪುರುಷ, ಬಸವನಗೌಡ ಬಡಾವಣೆ ಆವರಗೆರೆಯ 35ರ ಮಹಿಳೆ, ವಿವೇಕಾನಂದ ಬಡಾವಣೆ 5ನೇ ಮೇನ್‌ನ 39ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆಯ 30ರ ಮಹಿಳೆ, ಶ್ರೀರಾಮ ಬಡಾವಣೆ 1ನೇ ಕ್ರಾಸ್‌ನ 59ರ ಮಹಿಳೆ, 18ರ ಬಾಲಕ, 71ರ ವೃದ್ಧೆ, 

ಬಂಬೂ ಬಜಾರ್ ವಿಠ್ಠಲ್ ಮಂದಿರದ ಬಳಿಯ 45ರ ಪುರುಷ, ಸಿದ್ದವೀರಪ್ಪ ಬಡಾವಣೆ 8ನೇ ಕ್ರಾಸ್‌ನ 22ರ ಮಹಿಳೆ, ಸರಸ್ವತಿ ನಗರ 1ನೇ ಕ್ರಾಸ್‌ನ 42ರ ಪುರುಷ, ಕೆಟಿಜೆ ನಗರದ 61ರ ಮಹಿಳೆ, ದೊಡ್ಡಬಾತಿ ಆಶ್ರಮದ 17ರ ಯುವತಿ, ವಿಜಯನಗರ ಬಡಾವಣೆಯ 56ರ ಮಹಿಳೆ, ನಿಟುವಳ್ಳಿಯ 52ರ ಮಹಿಳೆ, ಮೆಹಬೂಬ್ ನಗರ 3ನೇ ಕ್ರಾಸ್‌ನ 45ರ ಪುರುಷ, ವಿನೋಬನಗರ 8ನೇ ಕ್ರಾಸ್‌ನ 50ರ ಪುರುಷ, ಆರ್.ಹೆಚ್. ವೃತ್ತ ಸರ್ಕಾರಿ ಶಾಲೆ ಹಿಂಭಾಗದ 48ರ ಮಹಿಳೆ, ಗಾಂಧಿ ನಗರ 5ನೇ ಕ್ರಾಸ್‌ನ 45ರ ಪುರುಷ.

ಕೆಎಸ್ಸಾರ್ಟಿಸಿಯ 51ರ  ಪುರುಷ, ಎಸ್.ಎಸ್. ಬಡಾವಣೆ ಎ ಬ್ಲಾಕ್‌ನ 27ರ ಪುರುಷ, ವಿದ್ಯಾನಗರದ 28ರ ಮಹಿಳೆ ನಿಟುವಳ್ಳಿ ಹೊಸ ಬಡಾವಣೆಯ 56ರ ಮಹಿಳೆ, ದೇವರಾಜ ಅರಸು ಬಡಾವಣೆಯ 69ರ ಪುರುಷ, ಬೇತೂರು ರಸ್ತೆಯ 58ರ ಪುರುಷ, ದೊಡ್ಡಬಾತಿಯ 29ರ ಪುರುಷ, ತರಳಬಾಳು ಬಡಾವಣೆಯ 54ರ ಪುರುಷ, ಕೆಬಿ ಬಡಾವಣೆ 5ನೇ ಕ್ರಾಸ್‌ನ 80ರ ವೃದ್ಧೆ, ಶಿವಾಜಿ ನಗರದ 70ರ ವೃದ್ಧ, ವಿನೋಬನಗರ 10ನೇ ಕ್ರಾಸ್‌ನ 70ರ ವೃದ್ಧೆ, ಮಣಿಕಂಠ ವೃತ್ತದ ಬಳಿಯ 36  ಪುರುಷ, ಶ್ರೀರಾಮ ಬಡಾವಣೆಯ 8ನೇ ಕ್ರಾಸ್‌ 13ರ ಬಾಲಕ, 16ರ ಬಾಲಕಿ, ಪಿ.ಜೆ. ಬಡಾವಣೆಯ 71ರ ಪುರುಷ.

ರಾಜೀವ್ ಗಾಂಧಿ ಬಡಾವಣೆಯ 51ರ ಪುರುಷ, ಲೋಕಿಕೆರೆಯ 35ರ ಪುರುಷ, ಕೆ.ಬಿ. ಬಡಾವಣೆ 1ನೇ ಕ್ರಾಸ್‌ನ 67ರ ಮಹಿಳೆ,  ದೇವರಾಜ ಅರಸ್ ಬಡಾವಣೆಯ 68ರ ಪುರುಷ, ಎಂ.ಸಿ.ಸಿ. ಬಿ ಬ್ಲಾಕ್‌ನ 30ರ ಮಹಿಳೆ, ಕುರ್ಕಿಯ 51ರ ಪುರುಷ, ಭಾಷಾ ನಗರ 7ನೇ ಕ್ರಾಸ್‌ನ 19ರ ಯುವತಿ, ಚಂದ್ರ ನಗರ ರಿಂಗ್ ರಸ್ತೆಯ 29ರ ಯುವತಿ, ಹೂವಿನ ಮಡು ಗ್ರಾಮದ 22ರ ಯುವತಿ, ಲೋಕಿಕೆರೆಯ 30ರ ಪುರುಷ, ಕೆಟಿಜೆ ನಗರ 18ನೇ ಕ್ರಾಸ್‌ನ 45ರ ಪುರುಷ, ದೊಡ್ಡಬಾತಿಯ 40ರ ಮಹಿಳೆ, ವಿದ್ಯಾನಗರದ 40ರ ಪುರುಷ, ಎಸ್.ವಿ. ಲೇಔಟ್‌ 10ನೇ ಕ್ರಾಸ್‌ನ 62ರ ಪುರುಷ.

ಎಸ್.ಎಸ್. ಬಡಾವಣೆ 32ರ ಪುರುಷ, ಕಕ್ಕರಗೊಳ್ಳದ 64ರ ಪುರುಷ, ಭಗವಾನ್ ಮಹವೀರ ರಸ್ತೆಯ 60ರ ಪುರುಷ, ಎಸ್.ಎಸ್. ಬಡಾವಣೆ 2ನೇ ಮೇನ್ 68ರ ಪುರುಷ, ವಿದ್ಯಾನಗರದ 75ರ ವೃದ್ಧೆ,  ಮೋತಿ ದೊಡ್ಡಪ್ಪ ಬಡಾವಣೆ 49ರ ಪುರುಷ,  ಜೆಜೆಎಂಎಂ ಕಾಲೇಜಿನ 25ರ ಯುವತಿ, ಸಿದ್ದೇಶ್ವರ ಬಡಾವಣೆ 5ನೇ ಮೇನ್ 44ರ ಪುರುಷ, ಸಿಂಗ್ರಿಹಳ್ಳಿಯ 41ರ ಪುರುಷ  ಇವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ದಾವಣಗೆರೆ ತಾಲ್ಲೂಕಿನ 65, ಹರಿಹರ 28, ಜಗಳೂರು 8, ಚನ್ನಗಿರಿ 2, ಹೊನ್ನಾಳಿ 41 ಹಾಗೂ ಹೊರ ಜಿಲ್ಲೆಯ ಒಬ್ಬರು ಸೇರಿ ಒಟ್ಟು 145 ಜನರು ಇಂದು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

error: Content is protected !!