ಶ್ರೀರಾಮ ಮಂದಿರ ನಿರ್ಮಾಣ : ನಿಧಿ ಸಮರ್ಪಣಾ ಅಭಿಯಾನದ ಸಭೆ

ದಾವಣಗೆರೆ, ಡಿ.23- ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಂಘ ಪರಿವಾದ ಸಮೇತರಾಗಿ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿನ ಶ್ರೀ ಗಣಪತಿ ದೇವಸ್ಥಾನದಲ್ಲಿ ನಗರದ ಪ್ರಮುಖರು ಸೇರಿ ನಗರದಲ್ಲಿ ಪ್ರತಿ ವಸತಿ ಸಹ ಜವಾಬ್ದಾರಿಗಳನ್ನು ಘೋಷಣೆ ಮಾಡಿ, ನಂತರ ದೀಪ ಬೆಳಗಿಸುವ ಮೂಲಕ ಶುಭ ಆರಂಭ ಮಾಡಲಾಯಿತು. 

ಜಿಲ್ಲಾ ಮಹಿಳಾ ಪ್ರಮುಖರಾದ ಸುಧಾ ಜಯರುದ್ರೇಶ್‌, ಶೋಭಾ ಕೊಟ್ರೇಶ್, ಮಂಜುಳಾ ಮಹೇಶ್, ಸವಿತಾ ರವಿಕುಮಾರ್, ಜಯಮ್ಮ, ನಾಗರತ್ನ ನಾಯಕ್, ಅಕ್ಷತಾ, ಉಷಾ ಶೆಟ್ಟಿ ಮುಂತಾದವರನ್ನೊಳಗೊಂಡ  ತಂಡವನ್ನು ರಚನೆ ಮಾಡಲಾಯಿತು. 

ನಂದಿ ಪೆಟ್ರೋಲ್ ಬಂಕ್‌ನ ಟಿ.ಎಸ್. ಜಯರುದ್ರೇಶ್‌, ಜೊಳ್ಳಿ ಗುರು, ಯೋಗಿಶ್ ಹೊಸಕೆರೆ, ರವೀಂದ್ರ ಆಚಾರ್ಯ  ಮತ್ತು ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!