ಜಗಳೂರು, ಡಿ.10- ಗೋಹತ್ಯೆ ನಿಯಂತ್ರಣ ಹಾಗೂ ಜಾನುವಾರು ಸಂರಕ್ಷಣಾ ವಿಧೇಯಕವು ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಗೋ ಪೂಜೆ ನೆರವೇರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಸದಸ್ಯರಾದ ಪಾಪಲಿಂಗಪ್ಪ , ನವೀನ್ ಕುಮಾರ್, ದೇವರಾಜ್, ಮುಖಂಡರಾದ ಜೆ.ವಿ. ನಾಗರಾಜ್, ಓಬಳೇಶ್, ನಾಗರಾಜ್, ರೇಖಾ ಶಿವಕುಮಾರ್ ಇನ್ನಿತರರಿದ್ದರು.
July 25, 2024