ಹರಪನಹಳ್ಳಿ, ಡಿ.10 – ತಾಲ್ಲೂಕು ಬಿಜೆಪಿ ಮಂಡಲದ ವತಿಯಿಂದ ಗೋಹತ್ಯೆ ನಿಷೇಧ ಕಾಯ್ದೆ ಸ್ವಾಗತಿಸಿ ಗೋವಿಗೆ ಪೂಜೆ ಮಾಡಿ ಹಣ್ಣು ತಿನ್ನಿಸಿ.ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಉದಯಕುಮಾರ, ಬಸವರಾಜ, ಪುರಸಭೆ ಸದಸ್ಯ ಗೌಳಿ ವಿನಯ್, ಮುಖಂಡರಾದ ಎಂ.ಪಿ.ನಾಯ್ಕ್, ಆರ್.ಕರಿಗೌಡ್ರು, ವಿಶ್ವನಾಥ ಶಿರಗನಹಳ್ಳಿ, ತಿಮ್ಮಣ್ಣ, ಜೆಟ್ಟಪ್ಪ, ವೀರೇಶ ಹಿಂದೂಸ್ತಾನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.