ಕುಣೆಬೆಳಕೆರೆಯಲ್ಲಿ ದೊಡ್ಡಎಡೆ ಜಾತ್ರೆ

ಮಲೇಬೆನ್ನೂರು, ನ.21- ಕುಣೆಬೆಳಕೆರೆ ಗ್ರಾಮದ ಆರಾಧ್ಯ ದೈವ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೊಡೆಎಡೆ ಜಾತ್ರೆ ಹಾಗೂ ದಸರಾ ಮರಿಬನ್ನಿ ಕಾರ್ಯಕ್ರಮವು ಶುಕ್ರವಾರ ಸಂಭ್ರಮದಿಂದ ಜರುಗಿತು.

ಜಿ.ಪಂ. ಅಧ್ಯಕ್ಷರಾದ ಶ್ರೀಮತಿ ದೀಪಾ ಜಗದೀಶ್, ಮಾಜಿ ಶಾಸಕರಾದ ಬಿ.ಪಿ.ಹರೀಶ್, ಹೆಚ್.ಎಸ್.ಶಿವಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ರೈಸ್‌ಮಿಲ್ ಮಾಲೀಕರಾದ ಯಕ್ಕ ನಹಳ್ಳಿ ಬಸವರಾಜಪ್ಪ, ಮುಖಂಡ ವೈ.ಎನ್.ಮಹೇಶ್, ತಾ.ಪಂ. ಸದಸ್ಯ ನಂದಿತಾವರೆ ಬಸವಲಿಂಗಪ್ಪ  ಮತ್ತಿತ ರರು ಜಾತ್ರೆಯಲ್ಲಿ ಭಾಗವಹಿಸಿದ್ದರು.

error: Content is protected !!