ಲಯನ್ಸ್ ನಿಂದ ಆವರಗೆರೆಯ ಗೋಶಾಲೆಗೆ ಹುಲ್ಲು ವಿತರಣೆ

ದಾವಣಗೆರೆ, ನ.14- ಆವರಗೆರೆಯ ಗೋಶಾಲೆಯ ರಾಸುಗಳಿಗೆ ನಗರದ ಲಯನ್ಸ್ ಕ್ಲಬ್‌ ವತಿಯಿಂದ ಎರಡು ಲೋಡ್ ಹುಲ್ಲನ್ನು  ಕ್ಲಬ್ಬಿನ ಅಧ್ಯಕ್ಷ  ಕೆ.ಎಂ. ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಇಂದು ನೀಡಲಾಯಿತು. ಕ್ಲಬ್ಬಿನ ಹಿರಿಯ ಸದಸ್ಯರೂ, ಮಾಜಿ ಅಧ್ಯಕ್ಷರೂ ಆಗಿರುವ ಹುಲ್ಲಿನ ದಾನಿ ಟಿ.ಎಂ.ಪಂಚಾಕ್ಷರಯ್ಯ, ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ, ಲಯನ್ಸ್ ಟ್ರಸ್ಟ್ ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಮೃತ್ಯುಂಜಯ, ಹಿರಿಯ ಲೆಕ್ಕಪರಿಶೋಧಕ ಜಂಬಗಿ ರಾಧೇಶ್, ಲಯನ್ಸ್ ಖಜಾಂಚಿ ಸಂಪತ್ ಬಿ.ಹಳ್ಳಿಕೇರಿ, ಸಹ ಕಾರ್ಯದರ್ಶಿ ಎಸ್.ಕೆ.ಮಲ್ಲಿಕಾರ್ಜುನ್, ನಿರ್ದೇಶಕ ಎನ್.ಸಿ. ಬಸವರಾಜ್,  ಪಾಲಿಕೆಯ ಗೋಪಿನಾಯ್ಕ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

error: Content is protected !!