ಕೊಲೆ ಆರೋಪಿಗಳಿಗೆ ಶಿಕ್ಷೆಗೆ ಆಗ್ರಹ

ದಾವಣಗೆರೆ, ನ.12- ಕೊಲೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ಮತ್ತು ಮೃತನ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ಗೋಂಧಳಿ ಸಮಾಜ ಸಂಘದ ತಾಲ್ಲೂಕು ಘಟಕವು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಇಂದು ಮನವಿ ಸಲ್ಲಿಸಿತು.

ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದಲ್ಲಿ ಗೋಂಧಳಿ ಸಮಾಜದ ಸುರೇಶ್ ವಾಸ್ಟರ್ ಜೋಷಿ ಅವರನ್ನು ಕೊಲೆ ಮಾಡಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು, ಮೃತನ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ಜೊತೆಗೆ ಗೋಂಧಳಿ ಸಮುದಾಯದ ರಕ್ಷಣೆಗೆ ಮುಂದಾಗಬೇಕು ಎಂದು ಸಮಿತಿ ಅಧ್ಯಕ್ಷ ನರಸಿಂಗ ರಾವ್ ಜೋಷಿ ವಾಗ್ಮೋಡೆ ಆಗ್ರಹಿಸಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಪರಶುರಾಮ ಗೌಡ್ರು ಗಣಾಚಾರಿ, ಮಂಜುನಾಥ್ ಭಗವತ್, ಚೌಡಪ್ಪ ಲಗವೆ, ವೀರೇಶ್ ರಾವ್ ಪಾಚಿಂಗೆ, ನರೇಂದ್ರ ನವಲೆ, ಪ್ರಭಾಕರ್ ನವಲೆ, ರಾಮಕೃಷ್ಣ ನವಲೆ, ಹನುಮಂತಪ್ಪ ಗಣಾಚಾರಿ, ಯಲ್ಲಪ್ಪ ವಾಗ್ಮೋಡೆ, ಮಂಜುನಾಥ್ ಗುರು, ಅಶೋಕ ಪಾಚಿಂಗೆ, ಪ್ರಕಾಶ್ ರಾಜ್ ಶಿಂಧೆ ಬಳ್ಳಾರಿ, ವಿಠಲರಾವ್ ವಾಗ್ಮೋಡೆ ಮತಿತ್ತರರು ಉಪಸ್ಥಿತರಿದ್ದರು

error: Content is protected !!