ಮೆಕ್ಕೆಜೋಳ ವ್ಯಾಪಾರಿ ಮೇಲೆ ಹಲ್ಲೆ, ಸುಲಿಗೆ

ದಾವಣಗೆರೆ, ನ.11- ಮುಂಜಾನೆಯ ವಾಯು ವಿಹಾರದಲ್ಲಿದ್ದ ಮೆಕ್ಕೆಜೋಳದ ವ್ಯಾಪಾರಿ ಯೋರ್ವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣವನ್ನು ಸುಲಿಗೆ ಮಾಡಿರುವ   ಘಟನೆ ನಡೆದಿದೆ.

ಮಾಯಕೊಂಡ ಗ್ರಾಮದ ಛತ್ರಪತಿ (65) ಸುಲಿಗೆಗೊಳಗಾದ ಮೆಕ್ಕೆಜೋಳ ವ್ಯಾಪಾರಿ. ಇಂದು  ಬೆಳಗಿನಜಾವ ವಾಯು ವಿಹಾರ ಮಾಡುತ್ತಿದ್ದ ಛತ್ರಪತಿ  ಮೇಲೆ ಸುಲಿಗೆಕೋರರು ತಲೆಗೆ ಹೊಡೆದು ಕೊರಳಲ್ಲಿದ್ದ ಸುಮಾರು 75 ಸಾವಿರ ಮೌಲ್ಯದ 30 ಗ್ರಾಂ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸೇತುವೆ ಬಳಿ ಕೆಇಬಿ ಹತ್ತಿರ ತಲೆಗೆ ಪೆಟ್ಟಾಗಿ ರಕ್ತ ಸುರಿಯುತ್ತಾ ಬಿದ್ದಿದ್ದ ಈತನನ್ನು ಕಂಡ ಪೇಪರ್ ಹಾಕುವ ಹುಡುಗನೋರ್ವ ಮನೆಗೆ ಕರೆ ತಂದಿದ್ದಾನೆ ಎಂದು ಛತ್ರಪತಿ ಅವರ ಪತ್ನಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. 

ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಮಾಯಕೊಂಡ ಪೊಲೀಸ್ ಠಾಣೆಯ ಎಎಸ್ ಐ ಮಲ್ಲಿಕಾರ್ಜುನ ತನಿಖೆ ಕೈಗೊಂಡಿದ್ದಾರೆ.

error: Content is protected !!