ಶಂಕರ್‌ ವಿಹಾರ್‌ನ ಪಾರ್ಕ್ ಸ್ವಚ್ಛತೆ

ದಾವಣಗೆರೆ, ನ.11- ನಗರದ 15ನೇ ವಾರ್ಡಿನ ಶಂಕರ್ ವಿಹಾರ್ ಬಡಾವಣೆಯ 2ನೇ ಹಂತದಲ್ಲಿ ಸುಮಾರು ವರ್ಷಗಳಿಂದ ಉದ್ಯಾನವನವು ಗಿಡ, ಕೊಂಪೆಗಳು ಬೆಳೆದು ಉದ್ಯಾನವನ ಕಾಣದಂತಾಗಿತ್ತು. ಈ ಉದ್ಯಾನವನವನ್ನು ಸ್ವಚ್ಛ ಗೊಳಿಸಬೇಕು. ವಾಯು ವಿಹಾರ, ವ್ಯಾಯಾಮ ಮಾಡಲು ಸಾರ್ವಜನಿಕರಿಗೆ ಪಾರ್ಕ್‌ನ ಅವಶ್ಯಕತೆ ಇದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ  ಈ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಅವರಿಗೆ ಇಲ್ಲಿನ ನಾಗರಿಕರು ಮನವಿ ಸಲ್ಲಿಸಿದ್ದರು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಆಶಾ ಉಮೇಶ್, ಕೂಡಲೇ ಜೆಸಿಬಿಯಿಂದ ಪಾರ್ಕ್‌ನ ನಿವೇಶನವನ್ನು ಸ್ವಚ್ಛಗೊಳಿಸಿದರು. ನಾಗರಿಕರ ಬೇಡಿಕೆಗಳಿಗೆ ಸ್ಪಂದಿಸಿದ ಆಶಾ ಉಮೇಶ್ ಅವರಿಗೆ ವಾರ್ಡಿನ ನಾಗರಿಕರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಭಾಗದ ಮುಖಂಡರಾದ ಉಮಾಶಂಕರ್, ಗೌಡರ್, ವಿನಯ್, ವೀರಯ್ಯಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!