ಜಿಲ್ಲಾ ಕಾರಾಗೃಹದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ದಾವಣಗೆರೆ, ಆ. 9 – ಜಿಲ್ಲಾ ಕಾರಾಗೃಹದಲ್ಲಿ ಕುಡಿಯುವ ನೀರಿನಿಂದಾಗಿ ಹಲವು ಆರೋಗ್ಯದ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇ ವೆಂದು ಪೋಲೀಸ್ ಅಧಿಕಾರಿಗಳು ಹಾಗೂ ಅಪರಾಧಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ  ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ನಗರ ಪಾಲಿಕೆ ಮಹಾಪೌರರಾದ ಬಿ.ಜಿ.ಅಜಯ್ ಕುಮಾರ್ ಅವರು ಇಂದು ಉದ್ಘಾಟಿಸಿದರು. 

ಈ ವೇಳೆ ಮಹಾನಗರ ಪಾಲಿಕೆ ಸದಸ್ಯರಾದ ಸ್ವಾಗಿ ಶಾಂತ ಕುಮಾರ್, ಎಲ್.ಡಿ.ಗೋಣೆಪ್ಪ, ಕಾರಾಗೃಹದ ಅಧೀಕ್ಷಕ ಕರ್ಣ ಕ್ಷತ್ರಿ, ಜೈಲರ್ ಎ.ಎನ್. ವರ್ಣೇಕರ್, ಸಹಾಯಕ ಜೈಲರ್ ಬಿ.ಆರ್ ಬಿರಾದರ್, ಆರ್.ಎಸ್.ಲಮ್ಮಾಣಿ, ಪಾಲಿಕೆ ಅಧಿಕಾರಿಗಳಾದ ವಿನಾಯಕ, ಜೋಷಿ ಹಾಗೂ ಇತರರು ಇದ್ದರು. 

error: Content is protected !!