ಹರಿಹರದಲ್ಲಿ ಸಂಭ್ರಮದ ರಾಘವೇಂದ್ರ ಸ್ವಾಮಿ ಆರಾಧನೆ

ಹರಿಹರ, ಆ. 6- ನಗರದ ತುಂಗಭದ್ರಾ ನದಿಯ ತಟದಲ್ಲಿ ಇರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ರಥೋತ್ಸವ ಶ್ರದ್ಧಾ – ಭಕ್ತಿಯಿಂದ ಇಂದು ನಡೆಯಿತು.

ಶ್ರೀ ರಾಘವೇಂದ್ರ ಸ್ವಾಮಿ, ಆಂಜನೇಯ ಸ್ವಾಮಿ, ಪಂಚಮುಖ ಆಂಜನೇಯ ಸ್ವಾಮಿಗೆ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿ ಮಠದ ಪ್ರಧಾನ ಅರ್ಚಕರಾದ ವರಹಚಾರ್, ಪವನ್, ಲಕ್ಷ್ಮಣ್, ಅಂಬಾಸಾ ಮೆಹರ್ವಾಡೆ, ಮಂಜುನಾಥ್, ದೇವೀರಮ್ಮ, ಮಂಜುಳಾ, ಛಾಯಾ, ಅರ್ಚನಾ, ಚೈತ್ರ, ನಾಗವೇಣಿ, ಭಾರತಿ, ಮಮತಾ, ಅಶ್ವಿನಿ, ಮಂಗಳಾ, ಬೀನಾಬಾಯಿ ಇತರರು ಹಾಜರಿದ್ದರು.  

error: Content is protected !!