ದಾವಣಗೆರೆ, ಆ.5- ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ತುಂಗಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಡ್ಯಾಂನಿಂದ ಯಾವುದೇ ಸಂದರ್ಭದಲ್ಲಿ ನೀರು ಬಿಡಬಹುದಾದ ಸಂಭವವಿದ್ದು, ನದಿ ದಂಡೆಯಲ್ಲಿ ಬರುವ ಹೊನ್ನಾಳಿ ಮತ್ತು ಹರಿಹರ ಪಟ್ಟಣಗಳ ಹಾಗೂ ಗ್ರಾಮಗಳ ಸಾರ್ವಜನಿಕರು ಎಚ್ಚರಿಕೆಯಿಂದಿರ ಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.ನದಿ ಅಪಾಯ ಮಟ್ಟ ಮೀರಿ ಹರಿದಾಗ ತೊಂದರೆಗೊಳಗಾಗುವ ಸಾರ್ವಜನಿಕರು ಜಿಲ್ಲಾಡಳಿತದಿಂದ ತೆರೆಯುವ ಕಾಳಜಿ ಕೇಂದ್ರಗಳಿಗೆ ಹೋಗಲು ಸಿದ್ಧರಿರಬೇಕು ಮತ್ತು ಜಾನುವಾರುಗಳನ್ನು ನದಿ ಬಳಿಗೆ ಬಿಡದಂತೆ ಎಚ್ಚರ ವಹಿಸುವಂತೆ ಅವರು ತಿಳಿಸಿದ್ದಾರೆ.
July 5, 2024