ಮಲೇಬೆನ್ನೂರಿನಲ್ಲಿ ದೊಡ್ಡ ಎಡೆ ಜಾತ್ರೆ

ಮಲೇಬೆನ್ನೂರು, ನ. 7- ಇಲ್ಲಿನ ಶ್ರೀ ಬೀರಲಿಂಗೇಶ್ವರ  ದೇವಸ್ಥಾನದಲ್ಲಿ ವಿಜಯದಶಮಿ ಹಾಗೂ ಮರಿಬನ್ನಿ ಅಂಗವಾಗಿ ದೊಡ್ಡ ಎಡೆ ಜಾತ್ರೆ ಇತ್ತೀಚೆಗೆ ಕಾಗಿನಲೆೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ  ಸಾನ್ನಿಧ್ಯದಲ್ಲಿ ಸರಳವಾಗಿ ಜರುಗಿತು. ಕೊರೊನಾ ಕಾರಣ ಈ ಬಾರಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿರಲಿಲ್ಲ. ಆದರೆ, ಸ್ವಾಮಿಯ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾ ಪ್ರಸಾದ ವಿನಿಯೋಗವನ್ನು ಎಂದಿನಂತೆ ನೆರವೇರಿಸಲಾಯಿತು ಎಂದು ಕೆ.ಪಿ. ಗಂಗಾಧರ್ ತಿಳಿಸಿದ್ದಾರೆ.

error: Content is protected !!