ಪತ್ರಿಕಾ ವಿತರಕರಿಗೆ ಸೌಲಭ್ಯಕ್ಕೆ ಆಗ್ರಹ

ದಾವಣಗೆರೆ, ನ.8- ವರ್ಷದ 361 ದಿನಗಳ ಕಾಲವೂ ನಿತ್ಯ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಪತ್ರಿಕಾ ವಿತರಕರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ. 

ಸರ್ಕಾರವು ಪತ್ರಿಕಾ ವಿತರಕರಿಗೆ ಕ್ಷೇಮ ನಿಧಿ ಸ್ಥಾಪಿಸಲು 2 ಕೋಟಿ ರೂ.ಗಳನ್ನು ಘೋಷಣೆ ಮಾಡಿದ್ದರೂ ಕಾರ್ಯರೂಪಕ್ಕ ಬಂದಿರುವುದಿಲ್ಲ ಎಂದು ಪತ್ರಿಕಾ ವಿತರಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ವಿತರಕರಿಗೆ ಮಳಿಗೆ ಅವಶ್ಯಕತೆ ಇದೆ. ಬೆಂಗಳೂರಿನಲ್ಲಿ ನೀಡಿರುವಂತೆ ವಿಮೆ ಹಾಗೂ ಮಳಿಗೆ ಸೌಲಭ್ಯ ನೀಡಬೇಕು. ಆರೋಗ್ಯ ವಿಮೆ, ಪಿಂಚಣಿ, ಉಚಿತ ವಸತಿ, ವಾಹನ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವಂತೆ ಪತ್ರಿಕಾ ವಿತರಕರುಗಳಾದ ಎ.ಎನ್ ಕೃಷ್ಣಮೂರ್ತಿ, ಪಿ.ಪ್ರಕಾಶ್, ಕುಮಾರಸ್ವಾಮಿ, ಆನಂದ್, ಶ್ರೀನಿವಾಸ್ ಮತ್ತು ಇತರರು ಒತ್ತಾಯಿಸಿದ್ದಾರೆ.

 

error: Content is protected !!