ಬಾಪೂಜಿ ಶಾಲೆಯಲ್ಲಿ ರಾಜ್ಯೋತ್ಸವ

ದಾವಣಗೆರೆ, ನ.3- ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ (ಸಿಬಿಎಸ್‌ಇ) ಶಾಲೆಯಲ್ಲಿ 65ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಶಾಲಾ ಪ್ರಾಂಶುಪಾಲ ಸಮರೇಂದ್ರ ಪಾಣಿಗ್ರಹಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕ ಪಿ.ವಿ. ಪ್ರಭು ಕನ್ನಡಿಗರ ವಿಶೇಷತೆಯನ್ನು ತಿಳಿಸಿದರು. ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಎಂ.ಜಿ. ಈಶ್ವರಪ್ಪ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಶಾಲೆಯ ಎಲ್ಲ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರ ಪರವಾಗಿ ಅಭಿನಂದನೆಗಳನ್ನು ತಿಳಿಸಲಾಯಿತು.

ಶಿಕ್ಷಕಿ ಡಿ.ಎಂ. ಹಂಸ ಕನ್ನಡ ಬಾವುಟ ಹಾಗೂ ಅದರ ಮಹತ್ವವನ್ನು ತಿಳಿಸಿದರು. ಶೈಕ್ಷಣಿಕ ಮಾರ್ಗದರ್ಶಕ ಸಿ. ಮಂಜಪ್ಪ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಸುಮ ಕುಲಕರ್ಣಿ, ಎಲ್ಸಿ ಲೂಯಿಸ್, ಶಾಲಾ ಬೋಧಕ-ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಸಂಗೀತ ಶಿಕ್ಷಕಿ ರಾಧಿಕಾ ಅಂಬರ್‌ಕರ್ ಹಾಗೂ ಶಿಕ್ಷಕಿಯರ ತಂಡ ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕ್ಕೆ ಚಾಲನೆ ನೀಡಿದರು. ಸಂಗೀತ ಶಿಕ್ಷಕ ಎನ್.ಎಸ್. ಪ್ರಭುಶಂಕರ್ ಪ್ರಾರ್ಥಿಸಿದರು.

error: Content is protected !!