ಹರಿಹರ ಕಸಬಾ ಗ್ರಾಮದೇವತೆ ದೇವಸ್ಥಾನದ ಹುಂಡಿ ಹಣ ಎಣಿಕೆ

ಹರಿಹರ, ನ.3- ಹೊಸಭರಂಪುರ ಬಡಾವಣೆ ಶ್ರೀ ಕಸಬಾ ಗ್ರಾಮದೇವತೆ ಊರಮ್ಮ ದೇವಸ್ಥಾನದ ಹುಂಡಿಯಲ್ಲಿ 74 ಸಾವಿರ ರೂಪಾಯಿ ಸಂಗ್ರಹವಾಗಿದೆ ಎಂದು ಸಮಿತಿ ಅಧ್ಯಕ್ಷ ವೀರಣ್ಣ ಪೂಜಾರ್ ತಿಳಿಸಿದ್ದಾರೆ.  ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಮುಖಂಡರಾದ ಕೆ.ಬಿ. ರಾಜಶೇಖರ್, ಸುರೇಶ್ ಚಂದಾಪೂರ್, ರೇವಣಸಿದ್ದಪ್ಪ ಬೆಣ್ಣೆ, ಕೆ.ಜಿ.  ಗುತ್ಯಪ್ಪ, ಎಂ. ಚಿದಾನಂದ ಕಂಚಿಕೇರಿ, ಪರಮೇಶ್ವರಪ್ಪ ನೀಲಗುಂದ, ಚಂದ್ರಪ್ಪ ಮಜ್ಜಿಗಿ, ಬೆಣ್ಣೆ ಸಿದ್ದೇಶ್, ವೇದಮೂರ್ತಿ, ಈರಣ್ಣ ಹಾವನೂರು, ಅರ್ಚಕ ನಾಗರಾಜ್ ಇನ್ನಿತರರಿದ್ದರು.

error: Content is protected !!