ಹೊನ್ನಾಳಿ : ಅಂತರ್ಜಾಲದಲ್ಲಿ ಕನ್ನಡ ನುಡಿ ಹಬ್ಬ ಸಾಕಾರಗೊಳಿಸೋಣ

ಹೊನ್ನಾಳಿ, ನ.3- ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿರ್ಮಾಣವಾಗಿರುವ ಶ್ರೀ ಒಡೆಯರ ಚಂದ್ರಶೇಖರ ಶಿವಾಚಾರ್ಯ ಕನ್ನಡ ಭವನದ ಬಳಿ ಕನ್ನಡಾಂಬೆಯ ಧ್ವಜಾರೋಹಣವನ್ನು ಪರಿಷತ್ ಅಧ್ಯಕ್ಷ ಕತ್ತಿಗಿ ಗಂಗಾಧರಪ್ಪ ನೆರವೇರಿಸಿದರು.

ಕತ್ತಿಗಿ ಗಂಗಾಧರಪ್ಪ ಮಾತನಾಡಿ, ಪರಿಸ್ಥಿತಿಗೆ ಅನುಗುಣವಾಗಿ ಈ ದಿನಾಚರಣೆಗೆ ಮುಂದಾಗಿದ್ದು, ಬರುವ ದಿನಗಳಲ್ಲಿ ಉತ್ತಮವಾಗಿ ಆಚರಿಸುವಂತೆ ಕನ್ನಡಾಂಭೆಯು ಸರ್ವರಿಗೂ ಶಕ್ತಿ ನೀಡಲಿ, ಜಿಲ್ಲೆಯಲ್ಲಿ ಪರಿಷತ್‍ನಿಂದ ಒಂದು ತಿಂಗಳ ಕಾಲ ನಡೆಯಲ್ಲಿರುವ ಅಂತರ್ಜಾಲದ ಕನ್ನಡ ನುಡಿ ಹಬ್ಬವನ್ನು ಸಾಕಾರಗೊಳಿಸೊಣ ಎಂಬುದಾಗಿ ಕರೆ ನೀಡಿದರು.

ಪದಾಧಿಕಾರಿಗಳಾದ ಸಿದ್ದಯ್ಯ, ಗೋವಿಂದಪ್ಪ, ಬಸವರಾಜ್, ರತ್ನಮ್ಮ, ಜಯಣ್ಣ, ಮಹೇಶ್ವರಪ್ಪ, ರೇವಣಪ್ಪ, ಶೇಖರಪ್ಪ ಇದ್ದರು.

error: Content is protected !!