ಕೂಡ್ಲಿಗಿ, ಅ.31 – ಕೂಡ್ಲಿಗಿ ಡಿವೈಎಸ್ಪಿ ಕಚೇರಿಯಲ್ಲಿ ಶ್ರೀ ವಾಲ್ಮೀಕಿ ಮಹರ್ಷಿ ಜಯಂತಿ ಹಾಗೂ ರಾಷ್ಟ್ರೀಯ ಏಕತಾ ದಿನಾಚರಣೆ ಆಚರಿಸಲಾಯಿತು. ಡಿವೈಎಸ್ಪಿ ಹರೀಶ್ ರೆಡ್ಡಿ ಅವರು ಸಿಬ್ಬಂದಿಯೊಂದಿಗೆ, ಶ್ರೀ ವಾಲ್ಮೀಕಿ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಸರ್ದಾರ್ ವಲ್ಲಭ ಬಾಯ್ ಪಟೇಲರು ಜಾರಿಗೆ ತಂದಿರುವ ರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯಕ್ತ ಅವರು ಸಿಬ್ಬಂದಿಗೆ ಐಕ್ಯತೆ ಪಾಲನೆ ಕುರಿತು ಪ್ರಮಾಣ ವಚನ ಬೋಧಿಸಿದರು. ಅವರು ಸಿಬ್ಬಂದಿಯೊಂದಿಗೆ ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ಹಾಗೂ ರಾಷ್ಟ್ರೀಯತೆಯೊಂದಿಗೆ ಐಕ್ಯತೆಯನ್ನು ಪ್ರತಿಪಾದಿಸುವುದು ಮತ್ತು ಪಾಲಿಸುವ ಕುರಿತು ಸಂಕಲ್ಪ ತೋರುವುದಾಗಿ ಪ್ರಮಾಣ ವಚನಗೈದರು. ಪೊಲೀಸ್ ಸಿಬ್ಬಂದಿಯವರಾದ ಅಜ್ಜಪ್ಪ ಗೌಡ, ರಾಮಾಂಜನೇಯ, ಇರ್ಷಾದ್ ಅಹಮ್ಮದ್, ಚನ್ನಬಸವನಗೌಡ, ರೇವಣ್ಣ, ನಾಗಭೂಷಣ ಹಾಜರಿದ್ದರು.
July 24, 2024