ಸಾಲಬಾಧೆ : ರೈತನ ಆತ್ಮಹತ್ಯೆ

ಸಾಲಬಾಧೆ : ರೈತನ ಆತ್ಮಹತ್ಯೆ - Janathavaniಹರಪನಹಳ್ಳಿ. ಆ.29- ಸಮೀಪದ ಸತ್ತೂರು ಗ್ರಾಮದ ಹೆಚ್.ಕೆ.ಬಸವರಾಜಪ್ಪ (32) ಅವರು ತಮ್ಮ ಹೊಲದಲ್ಲಿ ಮೊನ್ನೆ ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ನಂತರ ತಮ್ಮ ತಂದೆ ಹೆಚ್. ಕೊಟ್ರೇಶಪ್ಪಗೆ ಕರೆ ಮಾಡಿ, ನಮ್ಮ ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ. ಕೂಡಲೇ ಸ್ಥಳಕ್ಕೆ ಧಾವಿಸಿದ ತಂದೆ ಜನರ ಸಹಾಯದಿಂದ ಮಗನನ್ನು ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿದ ಸ್ವಲ್ಪ ಸಮಯದ ನಂತರ ಮಗ ಅಸುನೀಗಿದ್ದಾನೆ ಎಂದು ತಂದೆ ತಿಳಿಸಿದರು.

ಇವರಿಗೆ 1,50,000 ಫೈನಾನ್ಸ್ ಸಾಲ, ಕೈಗಡ ಹಾಗೂ ಬೈಕ್ ಲೋನ್ ಸೇರಿ ಸುಮಾರು 5 ಲಕ್ಷ ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.

error: Content is protected !!