ಬೆಳೆ ಹಾನಿ : ಔಷಧ ಕಂಪನಿಗಳ ವಿರುದ್ಧ ಶಿವಗಂಗಾ ಆಕ್ರೋಶ

ದಾವಣಗೆರೆ, ಅ.28- ತಾಲ್ಲೂಕಿನ ಕೊಡಗನೂರು ಗ್ರಾಮದ ರೈತ ಮಂಜುನಾಥ್ ಹಾಗೂ ಶಿವಮೂರ್ತಿ ಅವರ ಟೊಮ್ಯಾಟೋ ಬೆಳೆ ಹಾನಿಯಾದ ಜಮೀನಿಗೆ ಇಂದು ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿದ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಬಸವರಾಜು ವಿ.ಶಿವಗಂಗಾ ಅವರು, ಖಾಸಗಿ ಕ್ರಿಮಿನಾಶಕ ಕಂಪನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಮಾಯಕ ರೈತರಿಗೆ ಇಲ್ಲ ಸಲ್ಲದ ಸುಳ್ಳು ಹೇಳಿ, ಬೆಳೆ ಚೆನ್ನಾಗಿ ಬರುತ್ತದೆ ಎಂದು ನಂಬಿಸಿ, ಔಷಧ ನೀಡಿ ಮೋಸ ಮಾಡುತ್ತಾರೆ. ಸರ್ಕಾರ ಇಂತಹ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಅನ್ಯಾಯಕ್ಕೊಳಗಾದ ರೈತರಿಗೆ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಸೋಮಶೇಖರ್, ಶಿವರಾಜ್ ಬೇತೂರು, ಪ್ರಧಾನ ಕಾರ್ಯದರ್ಶಿಗಳಾದ ಬಾತಿ ಶಿವಕುಮಾರ್, ಎಸ್.ಕೆ.ಪ್ರವೀಣ್ ಕುಮಾರ್, ಮಾಯಕೊಂಡ ಬ್ಲಾಕ್ ಅಧ್ಯಕ್ಷ ಹಾಲೇಶ್, ಬಸವನಾಳ್ ಮತ್ತು ಕೊಡಗನೂರು ರೈತರು ಉಪಸ್ಥಿತರಿದ್ದರು.

error: Content is protected !!