ಮಲೇಬೆನ್ನೂರಿನಲ್ಲಿ ಬೀರಲಿಂಗೇಶ್ವರ ಕಾರಣಿಕ

ಮಲೇಬೆನ್ನೂರು, ಅ.27- ವಿಜಯದಶಮಿ ಅಂಗವಾಗಿ ಇಲ್ಲಿನ ಗ್ರಾಮದೇವತೆ ಶ್ರೀ ಏಕನಾಥೇಶ್ವರಿ ದೇವಸ್ಥಾನದ ಆವರಣದಲ್ಲಿ ಬನ್ನಿ ಮುಡಿಯುವುದಕ್ಕಿಂತ ಮುಂಚೆ ಶ್ರೀ ಬೀರಲಿಂಗೇಶ್ವರ ದೇವರ ಕಾರಣಿಕ ನಡೆಯಿತು. ಭೂಲೋಕ ನಡುಗೀತು, `ಭೂಮಿ ಬಾಯ್ಬಿಟ್ಟೀತು ಅದಕ್ಕೆ ನಾನಿದ್ದೀನಿ’ ಎಂದು ಪೂಜಾರಪ್ಪ ಕಾರಣಿಕ ನುಡಿದರು. ಪಟ್ಟಣದ ಎಲ್ಲಾ ದೇವರುಗಳು ಈ ವೇಳೆ ಹಾಜರಿದ್ದವು. ನಂತರ ಸಾಮೂಹಿಕ ಬನ್ನಿ ಮುಡಿಯಲಾಯಿತು.

ಮರಿಬನ್ನಿ : ಇಲ್ಲಿನ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆ ಮರಿಬನ್ನಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

error: Content is protected !!