ತವರಿನಿಂದ ಬಾರದ ಪತ್ನಿ, ಪತಿ ನೇಣಿಗೆ

ಕೂಡ್ಲಿಗಿ, ಅ. 27 – ಹೆರಿಗೆಗಾಗಿ ತವರು ಮನೆಗೆ ತೆರಳಿದ್ದ ಪತ್ನಿ, ವಾಪಸ್ ಬರುವುದು ತಡವಾದ ಕಾರಣಕ್ಕೆ ಬೇಸರಗೊಂಡ ಪತಿ ನೇಣಿಗೆ ಶರಣಾದ ಘಟನೆ ಕೂಡ್ಲಿಗಿ ತಾಲ್ಲೂಕಿನ ಮಾಡ್ಲಾಕನಹಳ್ಳಿಯಲ್ಲಿ ಶನಿವಾರ ನಡೆದಿದೆ.

ಆಪರೇಷನ್ ಮಾಡಿ ಹೆರಿಗೆಯಾಗಿದ್ದು ಇನ್ನು ಸ್ವಲ್ಪ ದಿನ ಇದ್ದು ನಂತರ ನಿಮ್ಮ ಮನೆಗೆ ನಿನ್ನ ಹೆಂಡತಿಯನ್ನು ಕಳಿಸುತ್ತೇವೆ ಎಂದು ಪತ್ನಿಯ ತವರು ಮನೆಯವರ  ಮಾತಿಗೆ ನೊಂದ ಪತಿ ಬಾಲರಾಜ್ (27) ನೇಣಿಗೆ ಶರಣಾಗಿದ್ದಾರೆ.

ಶಿವಪುರದ ಗೊಲ್ಲರಹಟ್ಟಿಯ ಬಾಲರಾಜ್, ಮಾಡ್ಲಾಕನಹಳ್ಳಿಯಲ್ಲಿರುವ ಮಾವ ದ್ಯಾವಪ್ಪನ ಮನೆಗೆ ತೆರಳಿ ಪತ್ನಿ ವಾಪಸ್ ಕಳಿಸಲು ಕೇಳಿದ್ದರು. ನಿರಾಕರಿಸಿದಾಗ ಬೇಸರಗೊಂಡು, ಮಾವನ ಕಣದಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿ ಮೃತ ವ್ಯಕ್ತಿಯ ತಾಯಿ ಶಾಂತಮ್ಮ ದೂರು ನೀಡಿದ್ದಾರೆ. ಈ ಬಗ್ಗೆ ಹೊಸಹಳ್ಳಿ ಠಾಣಾ ಪಿಎಸ್ಐ ನಾಗರಾಜ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

error: Content is protected !!