107 ಪಾಸಿಟಿವ್, ಸಕ್ರಿಯ ಸೋಂಕಿತರ ಸಂಖ್ಯೆ 479
ದಾವಣಗೆರೆ, ಜು. 23 – ಜಿಲ್ಲೆ ಯಲ್ಲಿ ಒಂದೇ ದಿನ 107 ಕೊರೊನಾ ಪ್ರಕರಣ ಗಳು ಕಾಣಿಸಿಕೊಂಡಿವೆ. ನೂರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿ ಕೊಂಡಿರುವುದು ಇದೇ ಮೊದಲು. ಇದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 479ಕ್ಕೆ ಏರಿಕೆಯಾಗಿದೆ.
ಇದೇ ದಿನದಂದು 26 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೂ ಬಿಡುಗಡೆಯಾದವರ ಸಂಖ್ಯೆ 667ಕ್ಕೆ ತಲುಪಿದೆ. ಇಬ್ಬರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 32ಕ್ಕೆ ತಲುಪಿದೆ.
ದಾವಣಗೆರೆಯ ಮದೀನಾ ಆಟೋ ಸ್ಟ್ಯಾಂಡ್ ಬಳಿಯ ನಿವಾಸಿ 68 ವರ್ಷದ ವ್ಯಕ್ತಿ ನಿಧನರಾಗಿದ್ದು, ಅವರು ರಕ್ತದೊ ತ್ತಡ, ಸಕ್ಕರೆ ಕಾಯಿಲೆ ಮತ್ತಿತರೆ ಸಮಸ್ಯೆಗಳಿಂದಲೂ ಬಳಲುತ್ತಿದ್ದರು. ಸೇವಾದಳ ಕ್ವಾರ್ಟರ್ಸ್ನ ನಿವಾಸಿ ಯಾದ 55 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು ಇವರೂ ಸಹ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದ ಸಮಸ್ಯೆಗಳಿಂದ ಬಳಲುತ್ತಿದ್ದರು.
ಗುರುವಾರದಂದು ಪತ್ತೆಯಾದ ಸೋಂಕುಗಳಲ್ಲಿ ದಾವಣಗೆರೆ ತಾಲ್ಲೂ ಕಿನ 64, ಹರಿಹರದ 25, ಜಗಳೂರಿನ 6, ಚನ್ನಗಿರಿಯ 1, ಹೊನ್ನಾಳಿಯ ಎರಡು ಹಾಗೂ ಇತರೆ ಜಿಲ್ಲೆಗಳ ಎಂಟು ಪ್ರಕರಣಗಳು ಸೇರಿವೆ.
ದಾವಣಗೆರೆ ತಾಲ್ಲೂಕಿನ 13, ಹರಿಹರದ 10, ಜಗಳೂರು, ಹೊನ್ನಾಳಿ ಹಾಗೂ ಇತರೆ ಜಿಲ್ಲೆಯ ತಲಾ ಒಬ್ಬರು ಗುಣಮುಖರಾಗಿ ಬಿಡುಗಡೆಯಾಗಿ ದ್ದಾರೆ.ದಾವಣಗೆರೆಯ ಬಸವರಾಜಪೇಟೆಯ 36 ವರ್ಷದ ವ್ಯಕ್ತಿ, ಶಿವನಗರದ 8 ವರ್ಷದ ಬಾಲಕಿ, ದೇವರಾಜ ಅರಸ್ ಬಡಾವಣೆಯ 43 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಆಂಜನೇಯ ಬಡಾವಣೆಯ 29 ವರ್ಷದ ಮಹಿಳೆ, ತರಳಬಾಳು ಬಡಾವಣೆಯ 82 ವರ್ಷದ ವೃದ್ಧ, ಹೊಂಡದ ವೃತ್ತದ 44 ವರ್ಷದ ವ್ಯಕ್ತಿ, ಆಂಜನೇಯ ಬಡಾವಣೆಯ 30 ವರ್ಷದ ವ್ಯಕ್ತಿ, ಬೆಳ್ಳೂಡಿ ಗಲ್ಲಿಯ 39 ವರ್ಷದ ವ್ಯಕ್ತಿ, ಕೆ.ಟಿ.ಜೆ. ನಗರದ 32 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.
ಜಾಲಿನಗರದ 64 ವರ್ಷದ ವ್ಯಕ್ತಿ, ಯಲ್ಲಮ್ಮ ನಗರದ 27 ವರ್ಷದ ಮಹಿಳೆ, ಹುಬ್ಬಳ್ಳಿ ಚೌಡಪ್ಪನ ಗಲ್ಲಿಯ 43 ವರ್ಷದ ವ್ಯಕ್ತಿ, ರಾಜ್ ರೆಸಿಡೆನ್ಸಿಯ 30 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.
ಆಂಜನೇಯ ಬಡಾವಣೆಯ 28 ವರ್ಷದ ವ್ಯಕ್ತಿ ಹಾಗೂ 48 ಮತ್ತು 58 ವರ್ಷದ ಮಹಿಳೆಯರು, ಅಮರಪ್ಪನ ತೋಟದ 49 ವರ್ಷದ ವ್ಯಕ್ತಿ, ಶಿವಾಜಿ ನಗರದ 38 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ.
ಯರಗುಂಟೆಯ 39 ವರ್ಷದ ವ್ಯಕ್ತಿ, ವಿದ್ಯಾನಗರದ 70 ವರ್ಷದ ವೃದ್ಧೆ, ಯಾತ್ರಿ ನಿವಾಸದಲ್ಲಿದ್ದ 47, 37 ಹಾಗೂ 27 ವರ್ಷದ ವ್ಯಕ್ತಿಗಳು ಹಾಗೂ 33 ಮತ್ತು 25 ವರ್ಷದ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ.
ಲೆನಿನ್ ನಗರದ 62 ವರ್ಷದ ವ್ಯಕ್ತಿ, ಶಂಕರ್ ವಿಹಾರ ಬಡಾವಣೆಯ 27 ವರ್ಷದ ವ್ಯಕ್ತಿ, ದೇವರಾಜ ಅರಸ್ ಬಡಾವಣೆಯ 62 ವರ್ಷದ ವೃದ್ಧ, ಜಯನಗರದ 29 ವರ್ಷದ ವ್ಯಕ್ತಿ, ಬಂಬೂ ಬಜಾರ್ನ 28 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಕಂಡು ಬಂದಿದೆ.
ಚಿಗಟೇರಿ ಆಸ್ಪತ್ರೆಯ 40 ವರ್ಷದ ಮಹಿಳೆಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ಮಹಾಲಕ್ಷ್ಮಿ ಲೇಔಟ್ನ 43 ವರ್ಷದ ವ್ಯಕ್ತಿ, ಸರಸ್ವತಿ ನಗರದ 44 ವರ್ಷದ ವ್ಯಕ್ತಿ, ಕೆ.ಬಿ. ಬಡಾವಣೆಯ 63 ವರ್ಷದ ವೃದ್ಧ, ಕೆ.ಟಿ.ಜೆ. ನಗರದ 60 ವರ್ಷದ ವೃದ್ಧ, ಪಿ.ಜೆ. ಬಡಾವಣೆಯ 49 ವರ್ಷದ ವ್ಯಕ್ತಿ, ಸರಸ್ವತಿ ನಗರದ 65 ವರ್ಷದ ವೃದ್ಧೆ, ನಿಟುವಳ್ಳಿಯ 55 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.
ಜಾಲಿನಗರದ 51 ವರ್ಷದ ವ್ಯಕ್ತಿ, ನ್ಯೂ ಬಂಬೂ ಬಜಾರ್ನ 44 ವರ್ಷದ ವ್ಯಕ್ತಿ, ಆಜಾದ್ ನಗರದ 21 ವರ್ಷದ ವ್ಯಕ್ತಿ, ವಿನೋಬನಗರದ 25 ವರ್ಷದ ವ್ಯಕ್ತಿ, ಎಂಸಿಸಿ ಎ ಬ್ಲಾಕ್ನ 57 ವರ್ಷದ ಮಹಿಳೆ, ಬಾಷಾ ನಗರದ 50 ವರ್ಷದ ಮಹಿಳೆ, ದೀಕ್ಷಿತ್ ರಸ್ತೆಯ 27 ವರ್ಷದ ಮಹಿಳೆ, ಸಿದ್ದವೀರಪ್ಪ ಬಡಾವಣೆಯ 30 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.
ಎಂಸಿಸಿ ಎ ಬ್ಲಾಕ್ನ 60 ವರ್ಷದ ವ್ಯಕ್ತಿ, ಕೆ.ಟಿ.ಜೆ. ನಗರದ 42 ವರ್ಷದ ವ್ಯಕ್ತಿ, ಕೊಟ್ಟೂರೇಶ್ವರ ಬಡಾವಣೆಯ 65 ವರ್ಷದ ವ್ಯಕ್ತಿ, ಹೊಂಡದ ವೃತ್ತದ 65 ವರ್ಷದ ವೃದ್ಧ, ಕೆ.ಎಸ್.ಆರ್.ಟಿ.ಸಿ.ಯ 34 ವರ್ಷದ ಸಿಬ್ಬಂದಿ, ನರಸರಾಜಪೇಟೆಯ 39 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.
ಹರಿಹರ ತಾ.ನಲ್ಲಿ 29 ಪಾಸಿಟಿವ್ : ನಗರದ ವಿವಿಧ ಬಡಾವಣೆಗಳಲ್ಲಿ ಗುರುವಾರ 29 ಕೊರೊನಾ ಸೋಂಕು ಪ್ರಕರಣ ದೃಢಪಟ್ಟವೆ ಎಂದು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.
ಇಲ್ಲಿಯವರೆಗೆ ಹರಿಹರ ತಾಲ್ಲೂಕಿನಲ್ಲಿ ಒಟ್ಟು 198 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 127 ವ್ಯಕ್ತಿಗಳು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಉಳಿದ 71 ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಗರದ ಕೋವಿಡ್ ಕೇರ್ ಸೆಂಟರ್ ನಲ್ಲಿ 73 ವ್ಯಕ್ತಿಗಳು ದಾಖಲಾಗಿದ್ದು, ಇದರಲ್ಲಿ 42 ವ್ಯಕ್ತಿಗಳು ಬಿಡುಗಡೆ ಹೊಂದಿದ್ದಾರೆ. ಐವರನ್ನು ದಾವಣಗೆರೆ ಸಾರ್ವಜನಿಕ ಚಿಗಟೇರಿ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದ 26 ಜನರಿಗೆ ಕೊವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಭರಿಸಲಾಗುತ್ತಿದೆ.
ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಒಟ್ಟು 66 ಕಂಟೈನ್ಮೆಂಟ್ ಝೋನ್ ಇದ್ದು ಅದರಲ್ಲಿ 7 ಕಡೆಗಳಲ್ಲಿ ತೆರವು ಮಾಡಲಾಗಿದ್ದು, ಉಳಿದ 59 ಸಕ್ರಿಯವಾಗಿವೆ ಎಂದು ಹೇಳಿದರು.
ರಾಣೇಬೆನ್ನೂರು: ಅಂತ್ಯಕ್ರಿಯೆಗೆ ಅಡ್ಡಿ : ಹಾವೇರಿಯ ಕೋವಿಡ್ ಆಸ್ಪತ್ರೆ ಯಲ್ಲಿ ನಿನ್ನೆ ಸಾವನ್ನಪ್ಪಿದ ಕೊರೊನಾ ವೈರಸ್ ಸೋಂಕಿತ ಶಂಕಿತ ಮಹಿಳೆಯ ಶವದ ಅಂತ್ಯಕ್ರಿಯೆಗೆ ಸ್ಥಳೀಯರು ವಿರೋಧ ಮಾಡಿದ್ದ ರಿಂದ ಶವ ತಂದ ಆಂಬ್ಯುಲೆನ್ಸ್ ಸುಮಾರು ಒಂದು ಗಂಟೆ ಕಾಲ ನಗರದ ಹೊರವಲಯದ ಮೆಡ್ಲೇರಿ ರಸ್ತೆ ಯಲ್ಲಿ ನಿಂತಿತ್ತು.
ಮೆಡ್ಲೇರಿ ರಸ್ತೆಯಲ್ಲಿ ಶವ ಹೂಳಲು ಗುರುತಿಸಿದ ಸರ್ಕಾರಿ ಜಾಗದ ಬಳಿಯ ಲಂಬಾಣಿ ತಾಂಡಾಗಳ ಜನರು ತೀವ್ರ ವಿರೋಧ ಮಾಡಿದ್ದರಿಂದ ದೇವರಗುಡ್ಡ ರಸ್ತೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಅಲ್ಲದೆ ಮುಂದೆಯೂ ಸಹ ಇದೇ ಸ್ಥಳದಲ್ಲಿಯೇ ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಹರಪನಹಳ್ಳಿಯಲ್ಲಿ ಮೂವರಿಗೆ ಕೋವಿಡ್ ಸೋಂಕು : ಕೋವಿಡ್ 19 ಸಾಂಕ್ರಾಮಿಕ ರೋಗ ಹರಪನಹಳ್ಳಿ ತಾಲ್ಲೂಕಲ್ಲಿ ಗುರುವಾರ ಮೂರು ಜನರಿಗೆ ಆವರಿಸಿದೆ.
ಕೆರೆಗುಡಿಹಳ್ಳಿ ಗ್ರಾಮದಲ್ಲಿ 23 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದ್ದು, ಈತ ಜು.12 ರಂದು ಬೆಂಗಳೂರಿನಿಂದ ಹರಪನಹಳ್ಳಿಗೆ ಆಗಮಿಸಿ ಕೊಟ್ಟೂರು ರಸ್ತೆಯ ವೃತ್ತದಲ್ಲಿ ಇರುವ ಅಣ್ಣನ ಮನೆಯಲ್ಲಿ ಉಳಿದು ಕೊಂಡು ಜು.14 ರಂದು ಗಂಟಲು ದ್ರವ ಪರೀಕ್ಷೆಗೆ ನೀಡಿದ್ದು, 21 ರಂದು ಕೆರೆಗುಡಿಹಳ್ಳಿಗೆ ಹೋಗಿ ದ್ದನು. ಈತ ಬೆಂಗಳೂರಿನ ಕೋರಮಂಗಲದಲ್ಲಿ ಕಟ್ಟಡ ಕೆಲಸ ನಿರ್ವಹಿಸಿದ್ದನು. ಈತನಿಗೆ 9 ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ.
ಕುಂಚೂರು ಗ್ರಾಮದಲ್ಲಿ 35 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ, ಈತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು, ಇಲ್ಲಿಗೆ 12ನೇ ತಾರೀಕು ಬಂದು ಸ್ವಾಬ್ ಪರೀಕ್ಷೆಗೆ ನೀಡಿದ್ದನು. ಸ್ವಂತ ಊರು ತಾವರಗೊಂದಿಯಾದರೂ ಮಾವನ ಮನೆ ಕುಂಚೂರಲ್ಲಿ ಉಳಿದು ಕೊಂಡಿದ್ದನು. ಈತನಿಗೆ 7 ಜನ ಪ್ರಾಥಮಿಕ ಸಂಪರ್ಕಿತರನ್ನು ಗುರುತು ಮಾಡಲಾಗಿದೆ.
ಹಲುವಾಗಲು ಗ್ರಾಮದಲ್ಲಿ 37 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದ್ದು, ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಲಿದ್ದ ಈತ ಜು.9 ರಂದು ಹಲುವಾಗಲಿಗೆ ಬಂದಿದ್ದು, ಈತನಿಗೆ 6 ಜನ ಪ್ರಾಥಮಿಕ ಸಂಪರ್ಕಿತರನ್ನು ಶಿಕ್ಷಣ ಇಲಾಖೆ ಗುರುತಿಸಿದೆ.
ದಾವಣಗೆರೆ ತಾಲ್ಲೂಕಿನ ಅತ್ತಿಗೆರೆಯ 41 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ.
ಜಗಳೂರಿನ ಜಾಮಿಯಾ ಮಸೀದಿಯ ಸರ್ಕಾರಿ ಉರ್ದು ಶಾಲೆಯ ಸಮೀಪದ 35 ಹಾಗೂ 40 ವರ್ಷದ ವ್ಯಕ್ತಿಗಳು ಹಾಗೂ 32 ವರ್ಷದ ಮಹಿಳೆ, 60 ವರ್ಷದ ವೃದ್ಧೆ, ಇಂದಿರಾ ಬಡಾವಣೆಯ 58 ವರ್ಷದ ವ್ಯಕ್ತಿಗಳಲ್ಲಿ ಸೋಂಕಿರುವುದು ಪತ್ತೆಯಾಗಿದೆ.
ಜಗಳೂರು ತಾಲ್ಲೂಕಿನ ಗುತ್ತಿಗುರ್ಗದಲ್ಲಿ 49 ವರ್ಷದ ವ್ಯಕ್ತಿ, ಕೊರಟಿಕೆರೆಯ 20 ವರ್ಷದ ವ್ಯಕ್ತಿ, ದೊಣೆಹಳ್ಲಿಯ 31 ವ್ಯಕ್ತಿಗಳಲ್ಲಿ ಸೋಂಕು ಕಂಡು ಬಂದಿದೆ.
ಹೊನ್ನಾಳಿಯ ಅರಕೆರೆ ಕಾಲೋನಿಯ 42 ವರ್ಷದ ಮಹಿಳೆ, ಹೊನ್ನಾಳಿ ತಾಲ್ಲೂಕಿನ ಪಾಲವ್ವನಹಳ್ಳಿಯ 21 ವರ್ಷದ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ.
ಹರಿಹರ ನಗರದ ಮರಾಠಗಲ್ಲಿಯ 44 ವರ್ಷದ ವ್ಯಕ್ತಿ, ಪ್ರಶಾಂತ ನಗರದ 47 ವರ್ಷದ ವ್ಯಕ್ತಿ, ಹವಳದ ಬೀದಿಯ 51 ವರ್ಷದ ಮಹಿಳೆ, ನಗರದ 17 ವರ್ಷದ ವ್ಯಕ್ತಿ, ವಿದ್ಯಾನಗರ ಬಿ ಬ್ಲಾಕ್ನ 30 ವರ್ಷದ ಮಹಿಳೆ, ಮಜ್ಜಿಗಿ ಲೇಔಟ್ನ ನಾಲ್ಕು ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದೆ.
ವಿದ್ಯಾನಗರದ 50 ವರ್ಷದ ವ್ಯಕ್ತಿ, ಭರತ್ ಕಾಂಪೌಂಡ್ನ 23 ವರ್ಷದ ಮಹಿಳೆ, ಶಾಮನೂರಿನ 39 ವರ್ಷದ ವ್ಯಕ್ತಿ, ರಾಮನಗರ ಮುಖ್ಯರಸ್ತೆಯ 42 ವರ್ಷದ ಮಹಿಳೆ, ಖಾಸಗಿ ದಂತ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯಾದ 48 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.
ಹರಿಹರ ನಗರದಲ್ಲಿ 6 ವರ್ಷದ ಬಾಲಕ, ನೀಲಕಂಠ ನಗರದ 42 ವರ್ಷದ ವ್ಯಕ್ತಿ, 25 ವರ್ಷದ ಮಹಿಳೆ, ಕಾಳಿದಾಸ ನಗರದ 34 ಹಾಗೂ 47 ವರ್ಷದ ವ್ಯಕ್ತಿಗಳು, ಹೆಚ್.ಎಸ್. ಬಡಾವಣೆಯ 28 ವರ್ಷದ ವ್ಯಕ್ತಿ, ಜೆ.ಸಿ. ಬಡಾವಣೆಯ 33 ವರ್ಷದ ಮಹಿಳೆ, ಕೆ.ಎಸ್.ಆರ್.ಟಿ.ಸಿ. ಡಿಪೋದ 43 ವರ್ಷದ ವ್ಯಕ್ತಿ, ಬೆಂಕಿ ನಗರದ 45 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ 25 ವರ್ಷದ ವ್ಯಕ್ತಿ ಹಾಗೂ ಟಿಪ್ಪು ನಗರದ 55 ವರ್ಷದ ವ್ಯಕ್ತಿ, ಇಂದಿರಾ ನಗರದ 17 ವರ್ಷದ ಯುವಕ, 23 ಹಾಗೂ 24 ವರ್ಷದ ವ್ಯಕ್ತಿಗಳು ಮತ್ತು 60 ಹಾಗೂ 44 ವರ್ಷದ ಮಹಿಳೆಯಲ್ಲಿ ಸೋಂಕು ಕಂಡು ಬಂದಿದೆ.
ಚನ್ನಗಿರಿ ತಾಲ್ಲೂಕಿನ ಕೊಂಡದಹಳ್ಳಿಯ 21 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.
ಹರಪನಹಳ್ಳಿಯ 7ನೇ ವಾರ್ಡ್ನಲ್ಲಿ 30 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹರಪನಹಳ್ಳಿ ತಾಲ್ಲೂಕಿನ ತೌಡೂರಿನ 24 ವರ್ಷದ ಮಹಿಳೆ, ಬೇವಿನಹಳ್ಳಿ ದೊಡ್ಡ ತಾಂಡಾದ 65 ವರ್ಷದ ವೃದ್ಧ, ಕಂಚಿಕೆರೆಯ 60 ವರ್ಷದ ವೃದ್ಧರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಚಿಕ್ಕಬಳ್ಳಾಪುರದ ಗುಡಿಬಂಡೆಯ ಎರಡು ವರ್ಷದ ಹೆಣ್ಣು ಮಗು ಹಾಗೂ 25 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ 39 ವರ್ಷದ ವ್ಯಕ್ತಿ ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹಿರೆಎಮ್ಮಿಗನೂರಿನ 30 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಕಂಡು ಬಂದಿದೆ.
ಇದೇ ದಿನದಂದು 26 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವರಲ್ಲಿ ದಾವಣಗೆರೆಯ 40 ವರ್ಷದ ವ್ಯಕ್ತಿ, ಎಂಸಿಸಿ ಎ ಬ್ಲಾಕ್ನ 12 ವರ್ಷದ ಮಹಿಳೆ, ಆಂಜನೇಯ ಬಡಾವಣೆಯ 56 ವರ್ಷದ ಮಹಿಳೆ, ಗಾಂಧಿನಗರದ 35 ವರ್ಷದ ಮಹಿಳೆ, ಜಯನಗರ ಬಿ ಬ್ಲಾಕ್ನ 34 ಹಾಗೂ 65 ವರ್ಷದ ಮಹಿಳೆಯರು, ಆಜಾದ್ ನಗರದ 13 ವರ್ಷದ ಬಾಲಕಿ, ಕುವೆಂಪು ನಗರದ 25 ವರ್ಷದ ವ್ಯಕ್ತಿ, ಆಜಾದ್ ನಗರದ 21 ವರಷದ ವ್ಯಕ್ತಿ, ಭಾರತ್ ಕಾಲೋನಿಯ 37 ವರ್ಷದ ವ್ಯಕ್ತಿ, ಎಸ್.ಪಿ.ಎಸ್. ನಗರದ 33 ವರ್ಷದ ವ್ಯಕ್ತಿಗಳು ಸೇರಿದ್ದಾರೆ.
ದಾವಣಗೆರೆ ತಾಲ್ಲೂಕು ಆರನೇಕಲ್ಲಿನ 17 ವರ್ಷದ ಯುವಕ ಗುಣವಾಗಿ ಬಿಡುಗಡೆಯಾಗಿದ್ದಾರೆ.
ಜಗಳೂರು ತಾಲ್ಲೂಕಿನ ತೋರಣಗಟ್ಟೆಯ 70 ವರ್ಷದ ವೃದ್ಧ ಹಾಗೂ ಹೊನ್ನಾಳಿ ತಾಲ್ಲೂಕಿನ ಹುಣಸಘಟ್ಟದ 60 ವರ್ಷದ ಮಹಿಳೆ ಗುಣ ಹೊಂದಿದ್ದಾರೆ.
ಹರಿಹರ ತಾಲ್ಲೂಕಿನ ಕೊಂಡಜ್ಜಿಯ 27 ವರ್ಷದ ವ್ಯಕ್ತಿ, ಕರ್ಲಹಳ್ಳಿಯ 33 ವರ್ಷದ ವ್ಯಕ್ತಿ, ತೆಗ್ಗಿನಕೆರೆಯ 17 ವರ್ಷದ ಯುವಕ,22 ಹಾಗೂ 36 ವರ್ಷದ ವ್ಯಕ್ತಿಗಳು, 22, 38 ಹಾಗೂ 50 ವರ್ಷದ ಮಹಿಳೆಯರು, ಬೆಳ್ಳೂಡಿಯ 40 ವರ್ಷದ ವ್ಯಕ್ತಿ ಹಾಗೂ ಹನಗವಾಡಿಯ 24 ವರ್ಷದ ವ್ಯಕ್ತಿ ಬಿಡುಗಡೆಯಾದವರಲ್ಲಿ ಸೇರಿದ್ದಾರೆ.
ಬಳ್ಳಾರಿ ಜಿಲ್ಲೆ ಹೊಸಪೇಟೆಯ 59 ವರ್ಷದ ಮಹಿಳೆ ಗುಣ ಹೊಂದಿದ್ದಾರೆ.