ಶ್ರೀ ಕನ್ಯಕಾ ಪರಮೇಶ್ವರಿಗೆ ಧನಲಕ್ಷ್ಮಿ ಅಲಂಕಾರ

ದಾವಣಗೆರೆ, ಅ. 26- ನಗರದ ಎಸ್.ಕೆ.ಪಿ. ರಸ್ತೆಯ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಜಯ ದಶಮಿ ಅಂಗವಾಗಿ ಸೋಮವಾರ ನೋಟುಗಳ ಅಲಂಕಾರ ಮಾಡಲಾಗಿತ್ತು.

9.9 ಲಕ್ಷ ರೂ. ಮೌಲ್ಯದ ನೋಟುಗಳಿಂದ ವಿಶೇಷ  ಧನಲಕ್ಷ್ಮಿ ಅಲಂಕಾರ ಮಾಡಲಾಗಿತ್ತು.

ಕಾಯಿನ್‌ಗಳು ಸೇರಿದಂತೆ 10 ರೂ.ಗಳಿಂದ 2 ಸಾವಿರ ರೂ. ಮೌಲ್ಯದ ರೂಪಾಯಿ ನೋಟುಗಳನ್ನು ಅಲಂಕಾರಕ್ಕೆ ಬಳಸಿಕೊಳ್ಳಲಾಗಿದೆ ಎಂದು ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್. ಪ್ರಭಾಕರ್ ತಿಳಿಸಿದ್ದಾರೆ. 

ಅಲಂಕಾರದ ಜವಾಬ್ದಾರಿಯನ್ನು ಸಂತೋಷ್ ಹಾಗೂ ಸ್ನೇಹಿತರು ವಹಿಸಿದ್ದರು.  ದೇವಸ್ಥಾನದ  ಕಾರ್ಯ ದರ್ಶಿ ಜೆ.ರವೀಂದ್ರ ಗುಪ್ತ, ಪ್ರಧಾನ ಅರ್ಚಕ ಗುಂಡಾ ಭಟ್ಟ, ಮ್ಯಾನೇಜರ್ ಸುರೇಶ್, ನಾಗೇಶ್, ಸಂತೋಷ್ ದೇಸಾಯಿ, ರಮೇಶ್, ಜೀವನ್, ಪ್ರಶಾಂತ್, ಸುನಿಲ್, ಕಪಿಲ್, ಶ್ರೀಧರ ಬಾಬು, ಗುರುಭಟ್ ಅವರುಗಳು ಅಲಂಕಾರಕ್ಕೆ ಸಹಕಾರ ನೀಡಿದ್ದಾರೆ.

error: Content is protected !!