ನಿಟುವಳ್ಳಿ : ಉಪ ಅಂಚೆ ಕಚೇರಿ ಉದ್ಘಾಟನೆ

ದಾವಣಗೆರೆ, ಜು.18- ನಿಟ್ಟುವಳ್ಳಿ ಶಾಖಾ ಅಂಚೆ ಕಚೇರಿಯನ್ನು ಬಟವಾಡೆ ಉಪ ಅಂಚೆ ಕಚೇರಿಯನ್ನು ಉನ್ನತೀಕರಣ ಗೊಳಿಸಿ ಹೆಚ್.ಕೆ.ಆರ್. ಸರ್ಕಲ್‌ನ ಕಟ್ಟಡಕ್ಕೆ ಸ್ಥಳಾಂತರಿಸ ಲಾಗಿದ್ದು, ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪ ಅವರು ಉದ್ಘಾಟಿಸಿದರು.

ಅಂಚೆ ಕಚೇರಿಯಯಲ್ಲಿ ಉಳಿ ತಾಯ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಆರ್‌.ಡಿ. ಖಾತೆ, ಹೂಡಿಕೆ ಖಾತೆಗಳು, ಪ್ರಧಾನಮಂತ್ರಿ ಯೋಜನೆಗಳು, ಆಧಾರ್ ನೋಂದಣಿ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ಖಾತೆ ಗಳು, ಎಇಪಿಎಸ್ ವ್ಯವಹಾರಗಳನ್ನು ಮತ್ತು ಬೆಸ್ಕಾಂ ಬಿಲ್‌ಗಳನ್ನು ಮಾಡಬಹುದಾಗಿದೆ.

ಕಾರ್ಯಕ್ರಮದಲ್ಲಿ ಸಹಾಯಕ ಅಂಚೆ ಅಧೀಕ್ಷಕ ಗುರುಪ್ರಸಾದ್, ಅಂಚೆ ನಿರೀಕ್ಷಕ ಕೊಟ್ರೇಶ್, ಮಾರುಕಟ್ಟೆ ಅಧಿಕಾರಿ ಮಹೇಶ್, ಪೋಸ್ಟ್ ಮಾಸ್ಟರ್ ದ್ರಾಕ್ಷಾಯಣಮ್ಮ, ಗಜಪತಿನಾಯ್ಕ, ಕಟ್ಟಡದ ಮಾಲೀಕ ನಾಗಭೂಷಣ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!