ಕುಂದುವಾಡ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಮಂಜಪ್ಪ

ದಾವಣಗೆರೆ, ಜು.18- ಕುಂದುವಾಡದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಹೆಚ್. ಜಿ. ಮಂಜಪ್ಪ ಹಾಗೂ ಉಪಾಧ್ಯಕ್ಷರಾಗಿ ಎಂ.ಎನ್. ನಿಂಗಪ್ಪ ಅವರುಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹೆಚ್.ಜಿ. ದೊಡ್ಡಪ್ಪ, ಶಿವರಾಜ್ ಜುಂಜಿ, ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಹೆಚ್.ಜಿ.ದಯಾನಂದ್, ಹೆಚ್.ಜಿ. ಧರ್ಮೇಶ್, ಮಾಜಿ ಮೇಯರ್ ಗುರುನಾಥ್, ನಗರ ಪಾಲಿಕೆ ಮಾಜಿ ಸದಸ್ಯ ಹೆಚ್. ತಿಪ್ಪಣ್ಣ, ಚನ್ನಬಸಪ್ಪಗೌಡ್ರು, ಹನುಮಂತಪ್ಪ, ದೇವರಾಜು, ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.

error: Content is protected !!