ಶುಚಿತ್ವದಿಂದ ರೋಗಗಳು ದೂರ

ಲಕ್ಷ್ಮೀಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಪಿ.ಟಿ.ಭರತ್ ಅಭಿಮತ

ಹರಪನಹಳ್ಳಿ, ಅ.21 – ಯುವಕರು ಗ್ರಾಮವನ್ನು ಹಾಗೂ  ದೇವಸ್ಥಾನವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ರೋಗಗಳಿಂದ ದೂರವಿರಬೇಕು ಎಂದು ಲಕ್ಷ್ಮೀಪುರ ಗ್ರಾಮ ಪಂ ಚಾಯಿತಿ ಮಾಜಿ ಅಧ್ಯಕ್ಷ ಪಿ.ಟಿ.ಭರತ್ ಹೇಳಿದರು. 

ತಾಲ್ಲೂಕಿನ ಚೌಡಾ ಪುರ ಗ್ರಾಮದಲ್ಲಿ ನೂತನ ವಾಗಿ ನಿರ್ಮಿಸಿದ ಆಂಜ ನೇಯ ದೇವಸ್ಥಾನದ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯ ಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಮುಜರಾಯಿ ಇಲಾಖೆಯ  5 ಲಕ್ಷ ರೂ.ಗಳ ವೆಚ್ಚದಲ್ಲಿ ಶ್ರೀ ಆಂಜನೇಯ ಸ್ವಾಮಿಯ  ನೂತನ  ದೇವಸ್ಥಾನದ ಕಳಸಾರೋಹಣವನ್ನು ನೆರವೇರಿಸಲಾ ಗಿದ್ದು, ನಾಡಿನಲ್ಲಿ ಸಕಾಲದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗುವ ಮೂಲಕ ರೈತರ ಬದುಕು ಹಸನಾಗಬೇಕು ಎಂದು ನಮ್ಮೆಲ್ಲರ ಆಶಯವಾಗಿದೆ ಎಂದರು.

ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಕೂಡ ಸಂಪ್ರಾದಾಯಗಳು, ಭಕ್ತಿಗೆ ಈ ತಾಲ್ಲೂಕಿನಲ್ಲಿ ಕಡಿಮೆ ಇಲ್ಲ.  ಸರ್ವ ಜನಾಂಗದವರು ಒಂದೇ ಕುಟುಂಬದವರು ಎನ್ನುವ ಭಾವನೆಯಲ್ಲಿ ಜೀವನ ನಡೆಸಬೇಕು ಎಂದ ಅವರು, ದೇವಸ್ಥಾನ ನಿರ್ಮಾಣ ಮಾಡುವುದು ದೊಡ್ಡದಲ್ಲ, ಅದರ ನಿರ್ವಹಣೆ, ಶುಚಿತ್ವ ಕಾಪಾಡಿಕೊಂಡು ನಿತ್ಯ ಪೂಜೆ, ಪುನಸ್ಕಾರದಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸಿಂಗ್ರಿಹಳ್ಳಿ ಟಿ. ನಾಗರಾಜ, ಸಿಂಗ್ರಿಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ. ಟಿ. ಶಿವಪ್ಪ, ಗ್ರಾ.ಪಂ.ಸದಸ್ಯ ಕೆಂಚಪ್ಪ, ಗೊಲ್ಲರ ಹಟ್ಟಿ ದಾಸಪ್ಪ, ನಿವೃತ್ತ ಮುಖ್ಯ  ಶಿಕ್ಷಕ ಎಂ.ಆನಂದಪ್ಪ, ಮುಖಂಡರಾದ ಷಣ್ಮುಖಪ್ಪ, ದೇವೇಂದ್ರಪ್ಪ, ಮೈದೂರು ಮಾರುತಿ, ಪಿ.ಡಿ.ಒ. ಚಂದ್ರಪ್ಪ, ಗ್ರಾ.ಪಂ.ಸದಸ್ಯ ಕಿಮ್ಯನಾಯ್ಕ, ಗಂಗಪ್ಪ, ಜಯಪ್ಪ, ಬೆಂಡಿಗೇರಿ ಮಂಜುನಾಥ, ಭರ್ಮಪ್ಪ, ದೇವರಾಜ, ವಿಜಯಕುಮಾರ್  ಸೇರಿದಂತೆ ಇತರರು ಇದ್ದರು.  

error: Content is protected !!