ಕೂಡ್ಲಿಗಿ ತಾಲ್ಲೂಕು ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷರಾಗಿ ಸುರೇಶ್

ಕೂಡ್ಲಿಗಿ, ಅ.21 – ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾದ ಕೂಡ್ಲಿಗಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪಟ್ಟಣದ ಎಸ್.ಸುರೇಶ್ ಅವರನ್ನು ರಾಜ್ಯ ವಾಲ್ಮೀಕಿ ಮಹಾ ಸಭಾದ ಕಾರ್ಯದರ್ಶಿ ಹರ್ತಿಕೋಟೆ ವೀರೇಂದ್ರಸಿಂಹ ನೇಮಕ ಮಾಡಿದ್ದು, ಬುಧವಾರ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿಂಕಲ್ ನಾಗಮಣಿ ಹಾಗೂ ಕೂಡ್ಲಿಗಿ ತಾಲ್ಲೂಕಿನ ವಾಲ್ಮೀಕಿ ಸಮಾಜ ಹಿರಿಯ ಮುಖಂಡರು ಆದೇಶ ಪತ್ರ ನೀಡಿದರು. 

ಕೂಡ್ಲಿಗಿ ತಾಲ್ಲೂಕು ವಾಲ್ಮೀಕಿ ಮಹಾಸಭಾದ ನೂತನ ಅಧ್ಯಕ್ಷ ಎಸ್.ಸುರೇಶ್, ವಾಲ್ಮೀಕಿ ಸಮಾಜದ ಮುಖಂಡ ಕಾವಲ್ಲಿ ಶಿವಪ್ಪ ನಾಯಕ ಮಾತನಾಡಿದರು. 

ಈ ಸಂದರ್ಭದಲ್ಲಿ ವಾಲ್ಮೀಕಿ ಮಹಾ ಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿಂಕಲ್ ನಾಗಮಣಿ, ಮಹಿಳಾ ಮುಖಂಡ ರಾದ ವಿ.ಗೀತಾ, ಕೂಡ್ಲಿಗಿ ತಾಲ್ಲೂಕು ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಜಯರಾಂ ನಾಯಕ, ವಾಲ್ಮೀಕಿ ಸಮಾಜದ ಮುಖಂಡರಾದ ಬಿ.ಭೀಮೇಶ್, ಚಿರಿಬಿ ಮಂಜು, ಕೆ.ಈಶಪ್ಪ, ಸಣ್ಣಕೊತ್ಲಪ್ಪ, ಮಂಜುನಾಥ ಮಯೂರ, ಚಂದ್ರು, ರಾಘವೇಂದ್ರ, ಶಂಕರ, ಬಸವರಾಜ ಮತ್ತಿತರರು ಹಾಜರಿದ್ದರು. 

error: Content is protected !!