ಅಣ್ಣನ ಸಾವು ಸಹಿಸಿಕೊಳ್ಳಲಾಗದೆ ತಮ್ಮ ಆತ್ಮಹತ್ಯೆ

ಹರಪನಹಳ್ಳಿ, ಜು.15- ಕಿಡ್ನಿ ಸಮಸ್ಯೆಯಿಂದ ಸಾವಿಗೀಡಾಗಿದ್ದ ಅಣ್ಣನ ಸಾವನ್ನು ತಡೆದುಕೊಳ್ಳಲು ಆಗದೆ ತಮ್ಮ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ರಾಗಿಮಸಲವಾಡ ಗ್ರಾಮದಲ್ಲಿ ನಡೆದಿದೆ.

35 ವರ್ಷದ ನಿಂಗಪ್ಪ ಆತ್ಮಹತ್ಯೆ ಮಾಡಿಕೊಂಡ ತಮ್ಮ. ನಿಂಗಪ್ಪನ ಅಣ್ಣ ಮಲ್ಲೇಶಪ್ಪ ಕಿಡ್ನಿ ಸಮಸ್ಯೆಯಿಂದ ಕಳೆದ ವಾರ ಮೃತಪಟ್ಟಿದ್ದ. ಅಲ್ಲಿಂದ ಇದೇ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡ ನಿಂಗಪ್ಪ ಪದೇ ಪದೇ ಮಲ್ಲೇಶಣ್ಣ ಇಲ್ಲದ ನಾನು ಬದುಕುವುದಿಲ್ಲ, ನಾನು ಎಲ್ಲಿಯಾದರೂ ಹೋಗಿ ಸಾಯುತ್ತೇನೆ ಎಂದು ಹೇಳುತ್ತಲೇ ಇದ್ದ. ಆಗ ಮನೆಯ ವರು ಸಮಾಧಾನ ಮಾಡುತ್ತಿದ್ದರು. ನಿನ್ನೆ ರಾತ್ರಿ ಗ್ರಾಮದ ಹೊರ ವಲಯಕ್ಕೆ ಹೋಗಿ, ಹುಣಸೆ ಮರಕ್ಕೆ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಹೋದರ ರಮೇಶ್ ಎಂಬಾತ  ನೀಡಿದ್ದ ದೂರನ್ನು ಹಲುವಾಗಲು ಪೋಲಿಸ್ ಠಾಣೆಯಲ್ಲಿ ಪಿಎಸ್ ಐ ಟಿ.ಆರ್. ಕೃಷ್ಣಪ್ಪ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

error: Content is protected !!