ಜನತಾದಳ ಎಸ್ಸಿ ಘಟಕದಿಂದ ಜಗಜೀವನ್ ರಾಂ ಪುಣ್ಯಸ್ಮರಣೆ

ದಾವಣಗೆರೆ, ಜು.11- ಹಸಿರು ಕ್ರಾಂತಿಯ ಹರಿಕಾರರು, ಸರ್ವ ಜನಾಂಗದ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದ ಡಾ. ಬಾಬು ಜಗಜೀವನ್‌ರಾಂ ಅವರ 34ನೇ ಪುಣ್ಯಸ್ಮರಣೆಯನ್ನು ಜಿಲ್ಲಾ ಜನತಾದಳದ ಎಸ್ಸಿ ಘಟಕದಿಂದ ಜೆಡಿಎಸ್ ಕಚೇರಿಯಲ್ಲಿ ಆಚರಿಸಲಾಯಿತು.

ಘಟಕದ ರಾಜ್ಯ ಉಪಾಧ್ಯಕ್ಷ ಎ.ಕೆ. ನಾಗಪ್ಪ ಮಾತನಾಡಿ, ದೇಶದ ಸಂಪತ್ತು ಹಸಿರು. ಹಸಿರಿನಿಂದ ಭಾರತ ಕಂಗೊಳಿಸಬೇಕಾದರೆ, ದೇಶ ಪ್ರಗತಿ ಹೊಂದಬೇಕಾದರೆ, ಸಾಮಾಜಿಕ ಸಮಾನತೆ, ಆರ್ಥಿಕ ಪ್ರಗತಿ ಹೊಂದಬೇಕಾದರೆ ಹಸಿರು ಕ್ರಾಂತಿ ಒಂದೇ ಮಾರ್ಗ ಎಂದು ಹೇಳಿದವರು ಜಗಜೀವನ್‌ ರಾಂ ಎಂದು ಸ್ಮರಿಸಿದರು.

ಘಟಕದ ಜಿಲ್ಲಾಧ್ಯಕ್ಷ ಸಿ. ಅಂಜಿನಪ್ಪ ಕಡತಿ ಮಾತನಾಡಿ, ಬಾಬು ಜಗಜೀವನ್‌ರಾಂ ಅವರ ಚಿಂತನೆಗಳು ಅಪಾರ. ರೈತರ, ಕೃಷಿ ಕೂಲಿ ಕಾರ್ಮಿಕರು, ದಲಿತರ, ಎಲ್ಲಾ ಜಾತಿಯ ಬಡವರ ಪರ ಚಿಂತಿಸಿ, ಬಡತನ ನಿರ್ಮೂಲನೆಯಾಗಬೇಕಾದರೆ ಹಸಿರು ಕ್ರಾಂತಿ ಆಗಬೇಕು ಎಂದು ವಿವಿಧ ಯೋಜನೆಗಳನ್ನು ಜಾರಿಗೆ ತಂದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಟಿ. ಮಹಮ್ಮದ್ ಗೌಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಂಜಿನಪ್ಪ, ಡಿ. ಮಲ್ಲಿಕಾರ್ಜುನ್, ಎ.ಡಿ. ಚಂದ್ರಪ್ಪ, ಶ್ರೀಕಾಂತ್ ಬಾಬು, ಪಿ. ಮಂಜುನಾಥ್, ಡಿ.ಸಿ. ಚಂದ್ರಶೇಖರಪ್ಪ, ಹರೀಶ್, ಪ್ರಸನ್ನ, ಗೊಡ್ಡಜ್ಜ, ಕೆ.ಎ. ಪೂರ್ಣಾನಂದ ಇನ್ನಿತರರಿದ್ದರು.

error: Content is protected !!