ಅಡುಗೆ ಸಿಲಿಂಡರ್ ಹೊತ್ತೊಯ್ದ ಕಳ್ಳರು

ದಾವಣಗೆರೆ, ಜು.10- ಮನೆಗೆ ಕನ್ನ ಹಾಕಿರುವ ಕಳ್ಳರು, 30 ಸಾವಿರ ನಗದು, ಸುಮಾರು 35 ಸಾವಿರ ಮೌಲ್ಯದ 10 ಗ್ರಾಂನ ಬಂಗಾರದ ಉಂಗುರದ ಜೊತೆಗೆ ಅಡುಗೆ ಸಿಲಿಂಡರನ್ನೂ ಸಹ ಬಿಡದೇ ಹೊತ್ತೊಯ್ದಿರುವ ಘಟನೆ ಇಲ್ಲಿನ ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಿಂಜಾರ್ ಗಲ್ಲಿ ವಾಸಿ ಹೂವಿನ ಅಂಗಡಿಯಲ್ಲಿ ಕೆಲಸ ಮಾಡುವ ಅಜ್ಗರ್ ಅಲಿ ಎಂಬಾತ ಕುಟುಂಬ ಸಮೇತರಾಗಿ ನಗರದ ಬಿಸ್ಮಿಲ್ಲಾ ಲೇಔಟ್ ನಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ಕೆ ಗುರುವಾರ ರಾತ್ರಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಈ ಕೃತ್ಯ ನಡೆಸಿದ್ದಾರೆ.

error: Content is protected !!