ಗುರು ನಮನ…

ಅರಿವ ಒಳ ಹರಿವು
ಮೊರೆಯುತಿರೆ. 

ಮರೆವ ಹೊರ ಮೋರಿ
ಮುರಿಯುತಿರೆ.

ಭವದ ಬಂಧನಗಳ ಕೊಂಡಿ
ಕಳಚುತಿರೆ. 

ಪರದ ಪರಿಪರಿ ಪರದೆಯು
ಸರಿಯುತಿರೆ.

ನೆರೆದ ಹೃನ್ಮನ ಮೆರೆದ
ಚಣಗಳನರಸುತಿರೆ.

ಗುರು ಪೊರೆದಿಹವ ಮರೆಯೆನೊ
ಕಾವ್ಯಾತ್ಮಾ. 


ಗುರು ನಮನ... - Janathavaniಆರ್.ಶಿವಕುಮಾರಸ್ವಾಮಿ ಕುರ್ಕಿ
[email protected]

 

error: Content is protected !!