ಔದಾರ್ಯವೆಂಬ ಆಭರಣ…

ಔದಾರ್ಯದಿಂದ ಭಾಸ್ಕರ
ಚೈತನ್ಯದ ಕಿರಣಗಳ ಭುವಿಗೆ
ಕರುಣಿಸುವನು.

ಔದಾರ್ಯದಿಂದ ಭೂಮಿ
ಜಗದ ಜೀವಿಗಳ ಸಲಹುವಳು.

ಔದಾರ್ಯದಿಂದ ಪ್ರಕೃತಿ
ಹಣ್ಣು ಹೂವು ಧವಸ ಧಾನ್ಯ
ನೀಡುವಳು.

ಔದಾರ್ಯದಿಂದ ಜೀವಜಲ
ಹರಿದು ದಾಹ ತಣಿಸುವುದು.

ಔದಾರ್ಯದಿಂದ ಗಾಳಿ
ಉಸಿರಾಗಿ ಜೀವಿಗಳ ಹರಸುವುದು.

ಔದಾರ್ಯದಿಂದ ದೀಪ
ತಮವ ಕಳೆದು ಬೆಳಕ ಚೆಲ್ಲುವುದು.

ಔದಾರ್ಯದಿಂದ ದೀನ
ದಲಿತರ, ಅಸಹಾಯಕರಿಗೆ
ಸಲ್ಲಿಸಿದ ಸೇವೆ, ಈಶ ಸೇವೆ
ಎನಿಸುವುದು.

ಔದಾರ್ಯವೇ ಅಲ್ಲವೇ
ಅಂತರಂಗದ ಆಭರಣ.

ಔದಾರ್ಯದಿಂದ ವ್ಯಕ್ತಿತ್ವದ ಔನ್ನತ್ಯ ಔದಾರ್ಯದಿಂದ
ದೈವ ಹರಸಿದರೆ ಜೀವನ
ಪಾವನವಲ್ಲವೇ…. ?


ಅಪರ್ಣಾ ದೇವಿ
ದಾವಣಗೆರೆ.

error: Content is protected !!