ಭದ್ರೆ ಪ್ರತಿವರ್ಷ ತುಂಬಿ, ರೈತರು ಸಮೃದ್ಧಿಯಾಗಲಿ

ರಸಗೊಬ್ಬರ, ಬಿತ್ತನೆ ಬೀಜ ಮಾರಾಟಗಾರರ ಸಂಘದ ಅಧ್ಯಕ್ಷ ಕರಿಬಸಯ್ಯ ಆಶಯ

ಮಲೇಬೆನ್ನೂರು, ಅ.9- ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಶುಕ್ರವಾರ ಹರಿಹರ ತಾಲ್ಲೂಕು ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಮಾರಾಟಗಾರರ ಸಂಘದಿಂದ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ. ಕರಿಬಸಯ್ಯ ಅವರು, ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯ ಪ್ರತಿವರ್ಷ ಭರ್ತಿಯಾಗಿ ರೈತರಿಗೆ ಸಮೃದ್ಧಿ ತರಲೆಂದು ಆಶಿಸಿದರು.

ಸಂಘದ ಗೌರವಾಧ್ಯಕ್ಷ ಹೆಚ್.ಜಿ. ಚಂದ್ರ ಶೇಖರ್, ಖಜಾಂಚಿ ಕುಂಬಳೂರಿನ ಯೋಗೇಂದ್ರಪ್ಪ, ಎಂ.ಜಿ. ಮೆಹರಾಡೆ, ಎಳೆಹೊಳೆ ರಂಗನಾಥ್, ನಂದಿತಾವರೆ ಶಂಭುಲಿಂಗಪ್ಪ, ಎಂ.ಬಿ. ಪಾಟೀಲ್, ಕುಂಬಳೂರಿನ ಎಂ. ವಾಸುದೇವಮೂರ್ತಿ, ಬೂದಿಹಾಳ್ ಕಿರಣ್‌ಕುಮಾರ್, ಜಿಗಳಿಯ ಗೌಡ್ರ  ಬಸವರಾಜಪ್ಪ, ಮಲೇಬೆನ್ನೂರಿನ ಪೂಜಾರ್‌ ರಂಗನಾಥ್‌, ಪೂಜಾರ್ ರವೀಂದ್ರ, ಕೆ.ಎಂ. ಶಿವಕುಮಾರ್, ಗುಳದಹಳ್ಳಿಯ ಪಾಪುಸ್ವಾಮಿ, ಹಳ್ಳಿಹಾಳ್ ಹರೀಶ್, ನಿಟ್ಟೂರಿನ ಬಿ.ಜಿ. ಮಂಜುನಾಥ್, ಗೋವಿನಹಾಳ್ ಚಂದ್ರು, ಹರಳಹಳ್ಳಿಯ ಹೆಚ್.ಪಿ. ಹನುಮಂತಪ್ಪ, ಭಾಸ್ಕರ್‌ರಾವ್ ಕ್ಯಾಂಪ್ ಭೀಮೇಶ್ವರರಾವ್, ಕೊಂಡಜ್ಜಿ ವಿಜಯಕುಮಾರ್, ಅನಿಲ್‌ ಮೆಹರಾಡೆ, ವಿನಾಯಕ, ರಾಜಣ್ಣ, ವೈ.ಎನ್. ಕುಮಾರ್, ಹರೀಶ್, ಶಂಭುಲಿಂಗಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!