ಹೆಲ್ಮೆಟ್ ಇಲ್ಲದೆ ಬೈಕ್ ಸಂಚಾರ ಜೀವಕ್ಕೆ ಅಪತ್ತು : ಡಿಎಸ್ಪಿ ಮಲ್ಲೇಶ್

 ಹರಪನಹಳ್ಳಿ, ಅ. 8 – ಹೆಲ್ಮೆಟ್ ಇಲ್ಲದೆ ಬೈಕ್ ಸಂಚಾರ ಮಾಡುವುದರಿಂದ ಅಪಘಾತ, ಸಾವು, ನೋವು ಸಂಭವಿಸುತ್ತಿದ್ದು, ಅವುಗಳನ್ನು ತಡೆಗಟ್ಟುವ ದಿಸೆಯಲ್ಲಿ ಸಾರ್ವಜನಿಕರಿಗೆ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿವೈಎಸ್‍ಪಿ ಮಲ್ಲೇಶ್ ದೊಡ್ಡಮನಿ ತಿಳಿಸಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಹೆಲ್ಮೆಟ್ ಇಲ್ಲದ ವಾಹನ ಸವಾರರನ್ನು ತಡೆದು ಅವರಿಗೆ ಗುಲಾಬಿ ಹೂ ನೀಡಿ, ಹೆಲ್ಮೆಟ್ ಖರೀದಿಸುವಂತೆ ಸಾರ್ವಜನಿಕರಿಗೆ ಜಾಗೃತಿ ನೀಡಿದ ನಂತರ ಅವರು ಮಾತನಾಡಿದರು.

ಅಪಘಾತ ತಡೆಗಟ್ಟುವ ಕುರಿತು ಸಭೆಯಲ್ಲಿ ಚರ್ಚೆ ನಂತರ ಹರಪನಹಳ್ಳಿ ಉಪವಿಭಾಗ ಠಾಣೆಯ ವ್ಯಾಪ್ತಿ ಯಲ್ಲಿ ಸಾರ್ವಜನಿಕರಗೆ ಅರಿವು ಮೂಡಿಸುವ ಉದ್ದೇಶ ದಿಂದ 9 ಠಾಣೆಗಳಲ್ಲಿ ಹೆಲ್ಮೆಟ್ ಇಲ್ಲದ ಬೈಕ್  ಸವಾರರನ್ನು ತಡೆದು,  ಇದಕ್ಕೆ 500 ರೂ. ದಂಡ ಇದೆ, ಅವರಿಗೆ ಒಂದು ಅವಕಾಶ ನೀಡಿ ಸ್ಥಳದಲ್ಲಿಯೇ ಹೆಲ್ಮೆಟ್‍ ಖರೀದಿಸ ಬೇಕು. ಇಲ್ಲದಿದ್ದಲ್ಲಿ ದಂಡವನ್ನು ವಸೂಲಿ ಮಾಡಲಾ ಗುವುದು. ಆದಷ್ಟು ದಂಡವಿಲ್ಲದೆ ಅವಕಾಶ ನೀಡಿ ಅವರಿಗೆ ಜಾಗೃತಿ ಅಭಿಯಾನ ಆರಂಭವಾಗಿದೆ ಎಂದರು.

ಸಿ.ಪಿ.ಐ. ಕೆ.ಕುಮಾರ ಮಾತನಾಡಿ,  ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಪ್ರತಿಯೊಬ್ಬರೂ ಮಾಸ್ಕ್‌ ಹಾಗೂ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಬೇಕು. ಈಗಾಗಲೇ 100ಕ್ಕೂ ಹೆಚ್ಚು ಜನರು ಹೆಲ್ಮೆಟ್ ಖರೀದಿಸಿ ಸಹಕರಿಸುತ್ತಿದ್ದಾರೆ, ಇನ್ನು ಕೆಲವರು ಹೆಲ್ಮೆಟ್ ಖರೀದಿಸಿ ಧರಿಸದೆ ಸಂಚಾರ ಮಾಡಿದಲ್ಲಿ ಅವರಿಗೂ ಕೂಡ ಸರ್ಕಾರದ ನಿಯಮದಂತೆ ದಂಡ ಹಾಕಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಬ್ ಇನ್‌ಸ್ಪೆಕ್ಟರ್ ಸಿ.ಪ್ರಕಾಶ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

error: Content is protected !!