ಡಿಕೆಶಿ ಮನೆ ಮೇಲೆ ದಾಳಿ ರಾಣೇಬೆನ್ನೂರಿನಲ್ಲಿ ಪ್ರತಿಭಟನೆ

ರಾಣೇಬೆನ್ನೂರು, ಅ.5 – ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಮಾಡಿರುವುದನ್ನು ಖಂಡಿಸಿದ ಇಲ್ಲಿನ ಕಾಂಗ್ರೆಸ್ ಮುಖಂಡರು, ಬಸ್ ನಿಲ್ದಾಣದ ಬಳಿ ಧರಣಿ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಮುಖಂಡರಾದ ಏಕನಾಥ ಭಾನುವಳ್ಳಿ, ರವೀಂದ್ರಗೌಡ ಪಾಟೀಲ, ನೀಲಕಂಠಪ್ಪ ಕುಸಗೂರ, ನಿಂಗಪ್ಪ ಕೋಡಿಹಳ್ಳಿ, ಪುಟ್ಟಪ್ಪ ಮರಿಯಮ್ಮನವರ, ಬಸವರಾಜ ಹುಚ್ಚಗೊಂಡರ, ಕಿಶೋರ ಸಣ್ಣಮನಿ, ಇರ್ಫಾನ್ ದಿಡಗೂರ,  ಐ.ಕೆ.ಬಳ್ಳಾರಿ ಇನ್ನು ಮುಂತಾದವರು ಪಾಲ್ಗೊಂಡಿದ್ದರು.

error: Content is protected !!