ಮೈಸೂರು ಜಿಲ್ಲೆ ಹುಣಸೂರು ವಾಸಿ ಹೆಚ್.ಆರ್. ವಿಶ್ವನಾಥ ಶೆಟ್ಟಿ ಅವರು ದಿನಾಂಕ 4.10.2020ರ ಭಾನುವಾರ ಸಂಜೆ 7 ಗಂಟೆಗೆ ನಿಧನರಾದರು. ಮೃತರಿಗೆ ಸುಮಾರು 94 ವರ್ಷ ವಯಸ್ಸಾಗಿತ್ತು. ವಿಶ್ವನಾಥ ಶೆಟ್ಟಿ, ದಾವಣಗೆರೆಯ `ಜನತಾವಾಣಿ’ ವರದಿಗಾರರಾದ ಶ್ರೀಮತಿ ದೇವಿಕ ಸುನೀಲ್ ಅವರ ತಂದೆ. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 5.10.2020ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಹುಣಸೂರು ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024