ದಾವಣಗೆರೆ, ಜೂ.29- ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಹಾಗೂ ಕೃತ್ಯಕ್ಕೆ ಬಳಸಿದ ಲಾರಿಯನ್ನು ನಿನ್ನೆ ರಾತ್ರಿ ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಹೆಬ್ಬಾಳ್ ಟೋಲ್ ಬಳಿ ವಶಪಡಿಸಿಕೊಂಡಿದ್ದಾರೆ.
ಪಡಿತರ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟದ ಉದ್ದೇಶದಿಂದ ರಾಣೇಬೆನ್ನೂರು ಕಡೆಯಿಂದ ಚಿತ್ರದುರ್ಗ ಕಡೆಗೆ ಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಶಿಕಾರಿಪುರ ತಾಲ್ಲೂಕು ಗೊಗ್ಗ ವಾಸಿ ಲಾರಿ ಚಾಲಕ ಮಂಜಾನಾಯ್ಕ ನನ್ನು ಬಂಧಿಸಲಾಗಿದೆ. ಲಾರಿ ಮಾಲೀಕ ರಾಣೇಬೆನ್ನೂರಿನ ಗುರಣ್ಣಗೆ ಶೋಧ ನಡೆಸಲಾಗಿದೆ.
ಗ್ರಾಮಾಂತರ ಠಾಣೆ ಪಿಎಸ್ಐ ಸಂಜೀವ್ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಸುಮಾರು 1.5 ಲಕ್ಷ ರೂ. ಮೌಲ್ಯದ ತಲಾ 50 ಕೆಜಿ ತೂಕದ 200 ಚೀಲ ಅಕ್ಕಿ ವಶಕ್ಕೆ ಪಡೆಯಲಾಗಿದೆ.