ಡಾ. ಹೆಚ್. ವಿಶ್ವನಾಥ್ ಅವರಿಗೆ ಗಾಂಧೀಜಿ ಸದ್ಭಾವನಾ ಶಾಂತಿ ಪ್ರಶಸ್ತಿ

ಡಾ. ಹೆಚ್. ವಿಶ್ವನಾಥ್ ಅವರಿಗೆ ಗಾಂಧೀಜಿ ಸದ್ಭಾವನಾ ಶಾಂತಿ ಪ್ರಶಸ್ತಿ - Janathavaniದಾವಣಗೆರೆ,ಅ.4- ನಗರದ ಶಿಕ್ಷಣ ತಜ್ಞ ಹಾಗೂ ಜಾನಪದ ವಿದ್ವಾಂಸ ಡಾ. ಹೆಚ್. ವಿಶ್ವನಾಥ್ ಅವರು ರಾಷ್ಟ್ರ ಮಟ್ಟದ ರಾಷ್ಟ್ರಪಿತ ಮಹಾತ್ಮ ಗಾಂಧಿ ಸದ್ಭಾವನಾ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನ ಆತ್ಮ ಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆಯು ಪ್ರತಿ ವರ್ಷ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆಯಂದು ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡಮಾಡುವ ಈ ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗೆ ಡಾ. ವಿಶ್ವನಾಥ್ ಅವರಿಗೆ ನೀಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಗುಣವಂತ ಮಂಜು ತಿಳಿಸಿದ್ದಾರೆ.

error: Content is protected !!