ಹರಪನಹಳ್ಳಿ ತಾಲ್ಲೂಕಿನ ಬಾಪೂಜಿ ನಗರದ ಬಯಲು ಸೀಮೆ ಮಂಡಳಿಯ ಮಾಜಿ ನಿರ್ದೇಶಕ ಪಿ.ವೇದು ನಾಯ್ಕ ಅವರ ತಂದೆ ಮೇಘಾನಾಯ್ಕ (72) ಅವರು ದಿನಾಂಕ 2.10.2020 ನೇ ಶುಕ್ರವಾರ ಸಂಜೆ 4 ಗಂಟೆಗೆ ನಿಧನರಾದರು. ಮೃತರಿಗೆ ಮೂರು ಜನ ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ದಿನಾಂಕ 3.10.2020 ನೇ ಶನಿವಾರ ಬೆಳಿಗ್ಗೆ 11 ಕ್ಕೆ ಸ್ವಗ್ರಾಮ ಬಾಪೂಜಿ ನಗರದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024