ಜಗಳೂರು ಪಟ್ಟಣ ಪಂಚಾಯ್ತಿಗೆ ಸುಭಾನ್ ಸದಸ್ಯ

ಜಗಳೂರು ಪಟ್ಟಣ ಪಂಚಾಯ್ತಿಗೆ ಸುಭಾನ್ ಸದಸ್ಯ - Janathavaniಜಗಳೂರು, ಅ.1- ಇಲ್ಲಿನ ಪಟ್ಟಣ ಪಂಚಾಯ್ತಿ ಸದಸ್ಯರನ್ನಾಗಿ `ಜನತಾವಾಣಿ’ ಉಪ ಸಂಪಾದಕ ಬಿ.ಪಿ. ಸುಭಾನ್ ಸಾಬ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಸುಭಾನ್, ಕಳೆದ ಪಟ್ಟಣ ಪಂಚಾಯ್ತಿ ಚುನಾವಣೆ ಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡಿರುವುದು ಸಂತಸವಾಗಿದ್ದು, ಅಲ್ಪಸಂಖ್ಯಾತರನ್ನು ಗುರುತಿಸಿ ಅಧಿಕಾರ ನೀಡಿರುವ ಶಾಸಕರು, ಸಂಸದರು ಹಾಗೂ ಪಕ್ಷದ ಮುಖಂಡರಿಗೆ ಸುಭಾನ್ ಕೃತಜ್ಞತೆ ಸಲ್ಲಿಸಿದ್ದಾರೆ.

ಸುಭಾನ್ ಅವರಲ್ಲದೇ, ಜಗಳೂರಿನ ಜಿ.ಎಸ್. ಗಿರೀಶ್ ಹಾಗೂ ಬಿ.ರುದ್ರಮುನಿ ಅವರುಗಳನ್ನೂ ಸಹ ನಾಮ ನಿರ್ದೇಶನ ಸದಸ್ಯರುಗಳನ್ನಾಗಿ ಸರ್ಕಾರ ನೇಮಕ ಮಾಡಿದೆ.

error: Content is protected !!