ಜೆ.ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ, ಬಿಎಸ್‍ಎನ್‍ಡಿಪಿಗೆ ಪದಾಧಿಕಾರಿಗಳ ಆಯ್ಕೆ

ಹರಪನಹಳ್ಳಿ, ಅ.1- ತಾಲ್ಲೂಕಿನ ಆರ್ಯ ಈಡಿಗ ಸಂಘದ ವತಿಯಿಂದ ಜೆ.ಪಿ. ನಾರಾಯಣ ಸ್ವಾಮಿ ಪ್ರತಿಷ್ಠಾನ ಹಾಗೂ ಬಿಎಸ್‍ಎನ್‍ಡಿಪಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಳ್ಳಾರಿ ಜಿಲ್ಲೆಯ ಬಿಎಸ್‍ಎನ್ ಡಿ ಪಿ ಹಾಗೂ ಜೆ ಪಿ ಎನ್ ಪ್ರತಿಷ್ಠಾನ ಜಿಲ್ಲಾಧ್ಯಕ್ಷ ಯರಿಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಅಯ್ಯನಗೌಡ, ಹೊಸಪೇಟೆ ತಾಲ್ಲೂಕಿನ ಆರ್ಯಈಡಿಗ ಸೇವಾ ಟ್ರಸ್ಟ್‍ನ ಈ. ಕುಮಾರ್ ಸ್ವಾಮಿ ಮತ್ತು ಈ ಪ್ರಸಾದ್‌ ಹಾಗೂ ಹರಪನಹಳ್ಳಿ ತಾಲ್ಲೂಕು ಆರ್ಯಈಡಿಗ ಸಂಘದ ಅಧ್ಯಕ್ಷ ಜಿ. ಜಗದೀಶ್‌ ಗೌಡ್ರು ಮತ್ತು ಗೌರವಾಧ್ಯಕ್ಷ ಈ. ದೇವದಾಸ್‌ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೆಪಿಎನ್‌ ಪ್ರತಿಷ್ಠಾನ ಹಾಗೂ ಬಿಎಸ್‍ಎನ್‍ಡಿ ಪಿಗಳ ಪದಾಧಿಕಾರಿಗಳ ಆಯ್ಕೆ ನಡೆಯಿತು. 

ಜೆ ಪಿ ಎನ್ ಪ್ರತಿಷ್ಠಾನದ ತಾಲ್ಲೂಕಿನ ಮುಖ್ಯ ಸಂಚಾಲಕರಾಗಿ ಎ. ವೆಂಕಟರಾಜು, ಆಡಳಿತ ಸಂಚಾಲಕರಾಗಿ ಶಿಂಗ್ರಿಹಳ್ಳಿ ಈ. ರಮೇಶ್, ಸಂಘಟನಾ ಸಂಚಾಲಕರಾಗಿ ತೆಲಿಗಿ ಈ. ಗಂಗಾಧರ, ಯುವ ಸಂಚಾಲಕರಾಗಿ ಈ. ಶರತ್‍ಕುಮಾರ್, ಮಹಿಳಾ ಸಂಚಾಲಕರಾಗಿ ಕೆ.ಎಂ. ರೇಖಾ ವಿಜಯಕುಮಾರ್ ಬೇವಿನ ಹಳ್ಳಿ, ಬೇವಿನಹಳ್ಳಿ ಈ. ಚನ್ನಬಸಪ್ಪ, ತೊಗರಿ ಕಟ್ಟಿ ಗುರುಶಾಂತಪ್ಪ, ಹಾರಕನಾಳು ನಾಗ ರಾಜ್, ಕೂಲಹಳ್ಳಿ ಚಿದಾನಂದಪ್ಪ, ಬಂಡ್ರಿ ಸೋಮ ನಾಥ್, ನೀಲಗುಂದ ಕೆ. ಮಲ್ಲಿಕಾರ್ಜುನ ಅವರುಗಳನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.

ಬಿಎಸ್‍ಎನ್‍ಡಿಪಿ (ಬ್ರಹ್ಮಶ್ರೀ ನಾರಾಯಣ ಗುರುಧರ್ಮ ಪರಿಪಾಲನಾ ಸಂಘದ) ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರಾಗಿ ಈ. ಮಂಜುನಾಥ ಹರಪನಹಳ್ಳಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ತಾಲ್ಲೂಕಿನ ಈಡಿಗರ ಸಂಘದ ಉಪಾಧ್ಯಕ್ಷ ತೊಗರಿಕಟ್ಟಿ ದುರ್ಗಪ್ಪ, ಕಾರ್ಯದರ್ಶಿ ಕಂಚಿಕೇರಿ ಈ. ವೆಂಕಟೇಶ್, ಖಜಾಂಚಿ ನಾರಾಯಣಸ್ವಾಮಿ, ಸಮಾಜದ ಮುಖಂಡರಾದ ತೆಲಿಗಿ ಜೀವಪ್ಪ, ಈ. ಬಸವರಾಜಪ್ಪ, ಈ. ಅಮರೇಶ್‌ ಗುತ್ತೇದಾರ್, ಕೂಲಹಳ್ಳಿ ಮಧುಕುಮಾರ್, ಷಣ್ಮುಖಪ್ಪ, ಬೇವಿನಹಳ್ಳಿ ನಾಗೇಂದ್ರಪ್ಪ, ಪ್ರವೀಣ ಶಿಂಗ್ರಿಹಳ್ಳಿ, ಈ. ಹನುಮಂತಪ್ಪ, ಮೇಗಳಗೇರಿ ಚೆನ್ನಪ್ಪ, ಹರಪನಹಳ್ಳಿ ಈ. ನಾಗಪ್ಪ, ಹುಲಿಗಮ್ಮ ಆರ್ಯಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಈ. ಶಶಿಕಲಾ, ಕಾರ್ಯಧರ್ಶಿ ಶೈಲಜಾ, ಶ್ರೀ ರೇಣುಕಾದೇವಿ, ಆರ್ಯಈಡಿಗ ಮಹಿಳಾ ಸಂಘದ ಶಿಂಗ್ರಿಹಳ್ಳಿ ಅಧ್ಯಕ್ಷೆ ಈ. ಪಲ್ಲವಿ ರಮೇಶ್  ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!